ಪ್ರಧಾನಿ ನರೇಂದ್ರ ಮೋದಿ ನಿಜವಾದ ದೇಶಭಕ್ತರಾಗಿದ್ದು, ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಸಮರ್ಥರು ಎಂದು ಭಾರತೀಯ ಜನತಾ ಪಕ್ಷದ ಸಂಸದ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನ್ನಾಡುತ್ತಿದ್ದ ಸಿಧು, ಚಂದ್ರ ಶೇಖರ್ ಆಜಾದ್ ಪಾರ್ಕ್ಗೆ ಭೇಟಿ ಇತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ನಮನ ಸಲ್ಲಿಸಿದ್ದು ಮೋದಿ ಅವರು ನಿಜವಾದ ದೇಶಭಕ್ತರೆನ್ನುವುದನ್ನು ಸ್ಪಷ್ಟ ಪಡಿಸುತ್ತದೆ ಎಂದು ಸಿಧು ಅಭಿಪ್ರಾಯ ಪಟ್ಟಿದ್ದಾರೆ.
ಮನುಷ್ಯನಲ್ಲಿ ಎರಡು ರೀತಿಯ ಭಾವನೆಗಳಿರುತ್ತವೆ. ಮೊದಲನೆಯದು ರೊಟ್ಟಿ, ಬಟ್ಟೆ, ಮನೆ ಹೊಂದುವುದು, ಇನ್ನೊಂದು ದೇಶದ ಮೇಲೆ ಪ್ರೀತಿ ಮತ್ತು ಅಪರ್ಣಾ ಭಾವ. ಪ್ರಧಾನಿ ಮೋದಿ ತಮ್ಮನ್ನು ತಾವು ಸಂಪೂರ್ಣವಾಗಿ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ ಎಂದು ಸಿಧು ತಮ್ಮ ಪಕ್ಷದ ನಾಯಕನನ್ನು ಕೊಂಡಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ರಾಮ ಪ್ರಸಾದ್ ಬಿಸ್ಮಿಲ್ ಅವರ 'ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ' ಸಾಲುಗಳನ್ನು ಉಚ್ಛರಿಸಿದ ಸಿಕ್ಸರ್ ಸಿಧು ಪ್ರತಿ ಭಾರತೀಯ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಅದ್ಭುತ ಇತಿಹಾಸದ ಬಗ್ಗೆ ಅಭಿಮಾನ ಪಟ್ಟುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕ ಭಾರತದ ಸಂಸ್ಕೃತಿ ಪೋಷಣೆಗೆ ತಮ್ಮಿಂದಾದ ಕೊಡುಗೆ ನೀಡಬೇಕು ಮತ್ತು ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬೇಕು ಎಂದು ಅವರು ಕೋರಿ ಕೊಂಡಿದ್ದಾರೆ.
ಕೆಲವು ಸ್ವಾತಂತ್ರ್ಯ ಹೋರಾಟಗಾರರು ಸಂಸ್ಥೆಗಳಂತಿದ್ದು ತಲೆಮಾರುಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ಸಿಧು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.