Webdunia - Bharat's app for daily news and videos

Install App

ಇದು ಫೇಸ್‌ಬುಕ್ ಲವ್ ಜಿಹಾದ್ ಕಥೆ

Webdunia
ಮಂಗಳವಾರ, 14 ಜೂನ್ 2016 (16:06 IST)
ಹಿಂದೂ ಮಹಿಳೆಗೆ ಗೋಮಾಂಸ ತಿನ್ನಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ ಘಟನೆ ಪಾಟ್ಣಾದಲ್ಲಿ ನಡೆದಿದೆ. ಪೀಡಿತೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಅತ್ತೆ ಮತ್ತು ಮಾವನನ್ನು ಬಂಧಿಸಲಾಗಿದೆ. 

ಜೂನ್ 13 ರಂದು ಪಾಟ್ಣಾದ ಫುಲ್ವಾರಿಯಲ್ಲಿ ಈ ಘಟನೆ ನಡೆದಿತ್ತು.
 
ಮೂಲತಃ ಕೋಲಕತ್ತಾದವಳಾದ ಹಿಂದೂ ಧರ್ಮದ ಯುವತಿ ರಾಖಿ(ಹೆಸರು ಬದಲಿಸಲಾಗಿದೆ)ಗೆ ಫೇಸ್‌ಬುಕ್ ಮೂಲಕ ಆಸೀಫ್ ಇಕ್ಬಾಲ್ ಎಂಬ ಮುಸ್ಲಿಂ ಯುವಕನ ಪರಿಚಯವಾಗಿತ್ತು. ಅವರಿಬ್ಬರಲ್ಲಿ ಫೋನ್ ನಂಬರ ವಿನಿಮಯ ಸಹ ನಡೆದು ಇಬ್ಬರು ಗಂಟೆಗಟ್ಟಲೆ ಫೋನ್ ಸಂಭಾಷಣೆ ನಡೆಸತೊಡಗಿದರು. ಸ್ವಲ್ಪ ದಿನದ ಬಳಿಕ ಆಸೀಫ್ ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯನ್ನು ಪಾಟ್ಣಾಕ್ಕೆ ಆಹ್ವಾನಿಸಿದ. ಮೊದ ಮೊದಲು ಅದಕ್ಕೆ ಒಪ್ಪದ ಆಕೆ ಕೊನೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ ಪಾಟ್ಣಾಕ್ಕೆ ಬಂದಿಳಿದಳು. ಆಕೆಯನ್ನು ಹೊಟೆಲ್ ಒಂದಕ್ಕೆ ಕರೆದೊಯ್ದ ಆತ ತಂಪು ಪಾನೀಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ. ಜತೆಗೆ ಈ ಕೃತ್ಯದ ವಿಡಿಯೋ ಚಿತ್ರೀಕರಿಸಿಕೊಂಡ.
 
ಅಲ್ಲಿಂದ ಕೋಲಕತ್ತಾಗೆ ಹಿಂತಿರುಗಿದ ಆಕೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಧೈರ್ಯ ಸಾಲಲಿಲ್ಲ. ಈ ಮಧ್ಯೆ ಆರೋಪಿ ಆಸೀಫ್ ಮದುವೆಯಾಗುವುದಾಗಿ ವಾಗ್ದಾನ ಮಾಡಿ ಮತ್ತೆ ಆಕೆಯನ್ನು ಪಾಟ್ಣಾಕ್ಕೆ ಕರೆಸಿಕೊಂಡು ಮತ್ತೆ ಅತ್ಯಾಚಾರವೆಸಗಿದ. ತನ್ನನ್ನು ಮದುವೆಯಾಗೆಂದು ಗೋಗರೆದಾಗ ತನ್ನ ತಂದೆ-ತಾಯಿ ಬಳಿ ಕರೆದೊಯ್ದ. ಅವರೆಲ್ಲ ಸೇರಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಆಕೆಯ ಮೇಲೆ ನಿರಂತರವಾಗಿ ಒತ್ತಡ ಹೇರಿದರು. ಆದರೆ ಆಕೆ ಅದನ್ನು ನಿರಾಕರಿಸಿದಳು. ಮದುವೆಯಾಗಬೇಕೆಂದರೆ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಬೇಕೆಂದ ಅವರು ಇಸ್ಲಾಂ ಧರ್ಮದ ಬಗ್ಗೆ ಅರಿತುಕೊಳ್ಳಲು ಆಕೆಯನ್ನು ಮದರಸಾಕ್ಕೆ ಕರೆದೊಯ್ದು ಬಿಟ್ಟರು. ಅಲ್ಲಿ ಆಕೆಗೆ ಗೋಮಾಂಸ ತಿನ್ನಿಸಲು ಯತ್ನಿಸಲಾಯಿತು. ಇದೆಲ್ಲದರಿಂದ ರೋಸಿ ಹೋದ ಆಕೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.  
 
ಗಾಂಧಿ ಮೈದಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments