Select Your Language

Notifications

webdunia
webdunia
webdunia
webdunia

ಮೋದಿ ಶಾರುಕ್ ಖಾನ್ ಆಗಲು ಹೊರಟಿದ್ದರು, ಆದ್ರೆ ಗಬ್ಬರ್ ಸಿಂಗ್ ಆಗಿದ್ದಾರೆ: ರಾಹುಲ್ ಗಾಂಧಿ

ಮೋದಿ ಶಾರುಕ್ ಖಾನ್ ಆಗಲು ಹೊರಟಿದ್ದರು, ಆದ್ರೆ ಗಬ್ಬರ್ ಸಿಂಗ್ ಆಗಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 17 ಫೆಬ್ರವರಿ 2017 (16:31 IST)
ಪ್ರಧಾನಿ ನರೇಂದ್ರ ಮೋದಿಯವರ ಅಚ್ಚೇ ದಿನ್ ಎಲ್ಲಿದೆ? ಶಾರುಕ್ ಖಾನ್ ಆಗಲು ಹೊರಟಿದ್ದವರು ಗಬ್ಬರ್ ಸಿಂಗ್ ಆಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
ರಾಯಬರೇಲಿಯ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ರಾಹುಲ್,  ಪ್ರಧಾನಿ ಮೋದಿಗೆ ಶ್ರೀಮಂತರ ಸಾಲವನ್ನು ಮನ್ನಾ ಮಾಡಲು ಸಮಯವಿದೆ. ಆದರೆ, ಬಡವರ, ಹಿಂದುಳಿದವರ, ಶೋಷಿತರ ಸಾಲವನ್ನು ಮನ್ನಾ ಮಾಡಲು ಅವರಿಗೆ ಸಮಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಯುಪಿಎ ಸರಕಾರ ರಾಯಬರೇಲಿ ಜಿಲ್ಲೆಯಲ್ಲಿ ಫುಡ್ ಪಾರ್ಕ್ ಮತ್ತು ರೈಲ್ವೆ ಬೋಗಿ ನಿರ್ಮಾಣ ಘಟಕ ನೀಡಿತ್ತು. ಆದರೆ, ಕೇವಲ ರಾಜಕೀಯ ಸೇಡಿಗಾಗಿ ಪ್ರಧಾನಿ ಮೋದಿ ಇತರ ಜಿಲ್ಲೆಗೆ ವರ್ಗಾಯಿಸಿದ್ದಾರೆ ಎಂದು ಕಿಡಿಕಾರಿದರು.
 
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೂರು ವರ್ಷಗಳ ಅವಧಿಯಲ್ಲಿ ಒಬ್ಬನೇ ಒಬ್ಬ ಯುವಕನಿಗೆ ಉದ್ಯೋಗ ಕೊಡಿಸಿಲ್ಲ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಕ್ಷೇತ್ರದಲ್ಲಿ ಫುಡ್ ಪಾರ್ಕ್ ಮತ್ತು ರೈಲ್ವೆ ನಿರ್ಮಾಣ ಘಟಕಕ್ಕೆ ಚಾಲನೇ ನೀಡಿದ್ದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕುತ್ತಿತ್ತು ಎಂದು  ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದರು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಂಜನಗೂಡು ಉಪಚುನಾವಣೆ: ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸಭೆ