ಯಮುನಾ ನದಿ ನೀರನ್ನು ಪ್ರಧಾನಿಯಾದ ನಾನೂ ಸೇವಿಸುತ್ತೇನೆ: ಕೇಜ್ರಿವಾಲ್ ಆರೋಪಕ್ಕೆ ಮೋದಿ ಕೆಂಡಾಮಂಡಲ

Krishnaveni K
ಬುಧವಾರ, 29 ಜನವರಿ 2025 (16:19 IST)
ನವದೆಹಲಿ: ಯಮುನಾ ನದಿ ನೀರಿಗೆ ಹರ್ಯಾಣದಲ್ಲಿ ಬಿಜೆಪಿಯವರು ವಿಷ ಮಿಕ್ಸ್ ಮಾಡಿ ದೆಹಲಿಗೆ ಹರಿಯಬಿಡುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದಾರೆ.

ದೆಹಲಿಯಲ್ಲಿ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ ಅವರು ಕೇಜ್ರಿವಾಲ್ ಆರೋಪದ ಬಗ್ಗೆ ಕಿಡಿ ಕಾರಿದ್ದಾರೆ. ಯಮುನಾ ನದಿಗೆ ಹರ್ಯಾಣ ಜನ ವಿಷ ಬೆರೆಸುವುದೇ? ಹರ್ಯಾಣದವರ ಸಂಬಂಧಿಕರು ದೆಹಲಿಯಲ್ಲೂ ಇಲ್ಲವೇ? ತಮ್ಮ ಸಂಬಂಧಿಕರಿಗೇ ಹರ್ಯಾಣದವರು ವಿಷದ ನೀರು ಕಳುಹಿಸುತ್ತಾರೆಯೇ? ಆರೋಪ ಹೊರಿಸುವುದಕ್ಕೂ ಮಿತಿ ಬೇಡವೇ? ಯಮುನಾ ನದಿ ನೀರನ್ನೇ ಪ್ರಧಾನ ಮಂತ್ರಿಯಾದ ನಾನು ಸೇರಿ ದೆಹಲಿಯ ಜನರೆಲ್ಲರೂ ಸೇವನೆ ಮಾಡುತ್ತಿದ್ದೇವೆ’ ಎಂದು ಮೋದಿ ಖಡಕ್ ಆಗಿ ಹೇಳಿದ್ದಾರೆ.

‘ಇದು ದೆಹಲಿ ಮಾಜಿ ಸಿಎಂ ಮತ್ತು ಅವರ ಪಕ್ಷ ಹರ್ಯಾಣ ಜನತೆಗೆ ಮಾಡಿದ ಅವಮಾನ. ಕೇವಲ ಹರ್ಯಾಣ ಮಾತ್ರವಲ್ಲ ಭಾರತೀಯರಿಗೇ ಮಾಡಿದ ಅವಮಾನ. ನಮ್ಮ  ದೇಶದಲ್ಲಿ ಕುಡಿಯಲು ನೀರು ನೀಡುವುದು ಅತ್ಯಂತ ಪುಣ್ಯದ ಕೆಲಸ ಎಂಬ ನಂಬಿಕೆಯಿದೆ. ಇದೀಗ ಸೋಲುವ ಭಯದಲ್ಲಿ ಏನು ಬೇಕಾದರೂ ಆರೋಪ ಮಾಡಬಹುದೇ? ಇಂತಹ ಜನರಿಗೆ ದೆಹಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಯಮುನಾ ನದಿ ನೀರಿಗೆ ಬಿಜೆಪಿಯವರು ವಿಷ ಬೆರೆಸಿ ದೆಹಲಿಗೆ ಕಳುಹಿಸುತ್ತಾರೆ ಎಂಬ ವಿಚಾರವಾಗಿ ಆಪ್ ಪಕ್ಷ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಚುನಾವಣಾ ಆಯೋಗ ಆರೋಪಕ್ಕೆ ತಕ್ಕ ಪುರಾವೆ ನೀಡಬೇಕು ಎಂದು ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments