Webdunia - Bharat's app for daily news and videos

Install App

ಅಧಿಕಾರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕಂಗಾಲಾದ ಅಧಿಕಾರಿ ಮಾಡಿದ್ದೇನು?

Webdunia
ಶುಕ್ರವಾರ, 22 ಡಿಸೆಂಬರ್ 2023 (12:54 IST)
ವ್ಯಕ್ತಿಯೊಬ್ಬ ದೂರವಾಣಿಯಲ್ಲಿ ಪ್ರಧಾನಿ ನಿಮಗೆ ಕರೆ ಮಾಡುತ್ತಾರೆಂದು ತಿಳಿಸಿದಾಗ ಏನಾಗುತ್ತಿದೆಯೆಂದು ನಂಬಲು ಅಧಿಕಾರಿಗೆ ಸಾಧ್ಯವಾಗಲಿಲ್ಲ. ಅವನ ಮೆದುಳು ಕೆಲವು ಸೆಕೆಂಡುಗಳ ಕಾಲ ಮರಗಟ್ಟಿತು. ಕಾಲುಗಳು ಅದುರುವ ಅನುಭವ ಉಂಟಾಯಿತು. ಕ್ಷೀಣ ದನಿಯಲ್ಲಿ ''ಎಸ್'' ಎಂದು ಉದ್ಗರಿಸಿದ್ದರು. ಕೆಲವು ಬೀಪ್ ಶಬ್ದಗಳ ಬಳಿಕ ಕರೆ ವರ್ಗಾಯಿಸಲಾಯಿತು ಮತ್ತು ಸ್ವಯಂ ಮೋದಿ ಕರೆ ಮಾಡಿದ್ದರು ಎಂದು ಪುಷ್ಪಕ್ ಪೋಸ್ಟ್‌ನಲ್ಲಿ ತಿಳಿಸಿದರು.
 
ರಾತ್ರಿ ಸುಮಾರು 10 ಗಂಟೆಯ ಸಮಯ. ತ್ರಿಪುರಾದ ಐಎಎಸ್‌ ಅಧಿಕಾರಿಗೆ ಕರೆಯೊಂದು ಬರುತ್ತದೆ. ಆ ಕರೆಯಲ್ಲಿ ಪ್ರಧಾನಮಂತ್ರಿ ಮೋದಿ ನಿಮ್ಮೊಡನೆ ಮಾತನಾಡಲು ಬಯಸುತ್ತಾರೆಂದು ತಿಳಿಸಿದ್ದಾಗ ಐಎಎಸ್ ಅಧಿಕಾರಿ ಜಂಘಾಬಲವೇ ಉಡುಗಿಹೋಗಿತ್ತು.  ಅವರಿಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಪ್ರಧಾನಿ ಏನು ಹೇಳುವರೋ ಎಂಬ ನಿರೀಕ್ಷೆಯಲ್ಲಿ ಅವರ ಮೈ ನಡುಗಲಾರಂಭಿಸಿತು. ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಲಾದ ಈ ಸುದ್ದಿ ವೈರಲ್ ಆಗಿದ್ದು, ಐಎಎಸ್ ಅಧಿಕಾರಿಯ ಆತಂಕವನ್ನು ಬಣ್ಣಿಸಿದೆ.
 
ಫೇಸ್‌ಬುಕ್ ಬಳಕೆದಾರ ಫುಷ್ಪಕ್ ಚಕ್ರವರ್ತಿ ಈ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿ ಅಧಿಕಾರಿಗೆ ಕರೆ ಮಾಡಿ  ಮಳೆಯಿಂದ ಹಾನಿಗೊಂಡ ಎನ್‌ಎಚ್ 208(ಎ) ರಸ್ತೆಯ ಸುಧಾರಣೆಗೆ ವೈಯಕ್ತಿಕವಾಗಿ ಗಮನಹರಿಸಿದ್ದನ್ನು ತಿಳಿಸಿದ್ದಾರೆ. ಎನ್‌ಎಚ್ 208 ತ್ರಿಪುರಾ ಜತೆ ದೇಶದ ಉಳಿದ ಭಾಗ ಸಂಪರ್ಕ ಹೊಂದಿದ ಏಕಮಾತ್ರ ಜೀವಸೆಲೆಯಾಗಿದೆ.
 
ನನ್ನ ತಂದೆಗೆ ಚಿರಪರಿಚಿತರಾದ ಐಎಎಸ್ ಅಧಿಕಾರಿ ಉತ್ತರ ತ್ರಿಪುರಾದಲ್ಲಿ ಸೇವೆಯಲ್ಲಿದ್ದು  ರಾತ್ರಿ 10ಗಂಟೆಗೆ ಈ ಕರೆ ಬಂದಿತ್ತು ಎಂದು ಪುಷ್ಪಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
 
ನರೇಂದ್ರ ಮೋದಿ ತಡವಾಗಿ ಕರೆ ಮಾಡಿದ್ದಕ್ಕೆ ಕ್ಷಮಾಪಣೆ ಕೇಳಿ ತಾವು ನಿತಿನ್ ಗಡ್ಕರಿ ಜತೆ ಸಭೆ ನಡೆಸಿದ್ದಾಗಿಯೂ ರಾಷ್ಟ್ರೀಯ ಹೆದ್ದಾರಿ 208-ಎ ದುರಸ್ತಿಗೆ ಅವರ ನೆರವು ಬೇಕೆಂದು ಹೇಳಿದರು. ಯೋಜನೆ ಮೇಲ್ವಿಚಾರಣೆಗೆ ಎಲ್ಲಾ ನೆರವನ್ನು ಒದಗಿಸುವುದಾಗಿ ಪ್ರಧಾನಿ ಭರವಸೆ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್ ಇಂಡಿಯಾ ವಿಮಾನದ ಬಾಲದಲ್ಲಿತ್ತು ಇನ್ನೊಂದು ಮೃತದೇಹ

Suhas Shetty Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಇಲ್ಲಿದೆ ಅಪ್ಡೇಟ್‌

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

ಮುಂದಿನ ಸುದ್ದಿ
Show comments