ಭಾರತ್ ಮಾತಾ ಕೀ ಜೈ ಎಂದು ಮೊದಲು ಹೇಳಿದ್ದು ಒಬ್ಬ ಮುಸ್ಲಿಂ: ಪಿಣರಾಯಿ ವಿಜಯನ್

Krishnaveni K
ಬುಧವಾರ, 27 ಮಾರ್ಚ್ 2024 (08:31 IST)
Photo Courtesy: Twitter
ತಿರುವನಂತಪುರಂ: ಭಾರತ್ ಮಾತಾ ಕೀ ಜೈ, ಜೈ ಹಿಂದ್ ಎಂಬ ಘೋಷಣೆಗಳನ್ನು ಮೊದಲು ಪರಿಚಯಿಸಿದ್ದೇ ಒಬ್ಬ ಮುಸ್ಲಿಂ ನಾಯಕ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಸಂಘ ಪರಿವಾರದವರು ಅವರ ಕಾರ್ಯಕ್ರಮಗಳಲ್ಲಿ ಭಾರತ್ ಮಾತಾ ಕೀ ಜೈ, ಜೈ ಹಿಂದ್ ಸ್ಲೋಗನ್ ಹೇಳಲು ಹೇಳುತ್ತಾರೆ. ಆದರೆ ಈ ಸ್ಲೋಗನ್ ಮೊದಲು ಪರಿಚಯಿಸಿದ್ದೇ ಓರ್ವ ಮುಸ್ಲಿಂ. 19 ನೇ ಶತಮಾನದಲ್ಲಿ ಮರಾಠಾ ಪೇಶ್ವ ನಾನಾ ಸಾಹೇಬ್ ಗೆ ಪ್ರಧಾನ ಮಂತ್ರಿಯಾಗಿದ್ದ ಅಝಿಮುಲ್ಲಾ ಖಾನ್ ಎಂಬಾತ ಈ ಸ್ಲೋಗನ್ ಗಳನ್ನು ಮೊದಲು ಹೇಳಿದ್ದ. ಆತ ಒಬ್ಬ ಮುಸ್ಲಿಂ. ಬಹುಶಃ ಇದು ಸಂಘ ಪರಿವಾರದವರಿಗೆ ಗೊತ್ತೇ ಇರಲ್ಲ.

ಅದೇ ರೀತಿ ಜೈ ಹಿಂದ್ ಎನ್ನುವ ಘೋಷಣೆಯನ್ನು ಪರಿಚಯಿಸಿದ್ದು ಓರ್ವ ಮಾಜಿ ರಾಯಭಾರಿ ಅಬಿದ್ ಹಸನ್ ಎಂಬಾತ. ಹಾಗಾಗಿ ಅದೂ ಕೂಡಾ ಮುಸ್ಲಿಮರ ಕೊಡುಗೆ. ಹೀಗಾಗಿ ಮುಸ್ಲಿಮರು ದೇಶ ಬಿಟ್ಟು ಹೋಗಬೇಕು, ಪಾಕಿಸ್ತಾನಕ್ಕೆ ಹೋಗಬೇಕು ಎನ್ನುವ ಸಂಘ ಪರಿವಾರದವರು ಮೊದಲು ಈ ಇತಿಹಾಸಗಳನ್ನು ತಿಳಿಯಬೇಕು’ ಎಂದಿದ್ದಾರೆ.

ಅವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪಿಕೆ ಕೃಷ್ಣದಾಸ್, ಹಾಗಿದ್ದರೆ ಮುಸ್ಲಿಮರು ಪರಿಚಯಿಸಿದ ಶಬ್ಧ ಎಂದು ಸಿಪಿಎಂ ನಾಯಕರು ಈ ಸ್ಲೋಗನ್ ಗಳನ್ನು ಹೇಳಲು ತಯಾರಿದ್ದಾರೆಯೇ?’ ಎಂದು ಪ್ರಶ್ನಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments