Webdunia - Bharat's app for daily news and videos

Install App

ಪೈಲಟ್ಗೆ ಹೃದಯಾಘಾತ : ಬಾಂಗ್ಲಾ ವಿಮಾನ ನಾಗ್ಪುರದಲ್ಲಿ ತುರ್ತು ಭೂ ಸ್ಪರ್ಶ

Webdunia
ಶನಿವಾರ, 28 ಆಗಸ್ಟ್ 2021 (11:49 IST)
ನಾಗ್ಪುರ, ಆ.28 :  ಬಾಂಗ್ಲಾ ದೇಶದ ಬಿಮನ್ ಏರ್ಲೈನ್ ವಿಮಾನ ನಾಗ್ಪುರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. ಮಸ್ಮತ್ನಿಂದ ಬಾಂಗ್ಲಾ ದೇಶದ ರಾಜಧಾನಿ ಢಾಕಾಗೆ ವಿಮಾನದ ಪೈಲಟ್ಗೆ ಹೃದಯಾಘಾತಕ್ಕೊಳಗಾಗಿ ನಾಗ್ಪುರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ್ದು , ತಕ್ಷಣ ಸಿಬ್ಬಂದಿಗಳು ಸ್ಪಂದಿಸಿದ್ದಾರೆ.

ಸುಮಾರು 126 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕಳೆದ ರಾತ್ರಿ 11.40ರ ಸುಮಾರಿಗೆ ಏಕಾಏಕಿ ನಿಯಂತ್ರಣಗೊಂಡಿತ್ತು. ಏನಾಯಿತು ಎಂದು ತಿಳಿಯುವ ಬಗ್ಗೆ ವರದಿ ಬಂದು ಪೈಲೆಟ್ಗೆ ಹೃದಯಾಘಾತವಾಗಿದೆ. ಯಾರೂ ಆತಂಕಗೊಳ್ಳಬೇಡಿ ಎಂದು ತಿಳಿಸಲಾಯಿತು. ಸುಮಾರು 11 ಗಂಟೆಗೆ ಕಾಲ ಪ್ರಯಾಣಿಕರು ವಿಮಾನದಲ್ಲೇ ಸಿಲುಕಿ ಕೆಲವರು ಗಾಬರಿಗೊಂಡಿದ್ದರು.
ಈ ಸಂಬಂಧ ನಾಗ್ಪುರ ವಿಮಾನ ನಿಲ್ದಾಣ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು , ಬಿಮಾನ್ ಏರ್ಲೈನ್ ತುರ್ತು ಭೂ ಸ್ಪರ್ಶಕ್ಕೆ ಮನವಿ ಮಾಡಿದ ನಂತರ ನಾವು ಎಲ್ಲಾ ಎಚ್ಚರಿಕೆ ವಹಿಸಿ ಪರಿಸ್ಥಿತಿ ನಿಭಾಯಿಸಿದ್ದೇವೆ. ಪೈಲೆಟ್ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಅವರನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿಮಾನ ರಾಯಪುರದ ಬಳಿ ಇದ್ದಾಗ ಸಹ ಪೈಲೆಟ್ ಕೊಲ್ಕೊತ್ತಾದ ಎಟಿಸಿಗೆ ಮಾಹಿತಿ ನೀಡಿ ಭಾರತದಲ್ಲಿ ಇಳಿಯಲು ಅನುಮತಿ ಕೇಳಿದ್ದರು. ಅದಕ್ಕೆ ಸ್ಪಂದಿಸಲಾಯಿತು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments