Webdunia - Bharat's app for daily news and videos

Install App

ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನರು

Webdunia
ಗುರುವಾರ, 31 ಆಗಸ್ಟ್ 2023 (07:54 IST)
ಕೋಲ್ಕತ್ತಾ : ಬುಧವಾರ (ಇಂದು) ರಾತ್ರಿ ಶ್ರಾವಣ ಪೌರ್ಣಮಿ ಆಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಸೂಪರ್ ಬ್ಲೂ ಮೂನ್ ದರ್ಶನವಾಗಿದೆ. ಇತರೇ ದಿನಗಳಿಗಿಂತ ಚಂದ್ರ ದೊಡ್ಡದಾಗಿ ಕಾಣಿಸಿಕೊಂಡಿದ್ದು, ಈ ಕೌತುಕವನ್ನು ಜನರು ಕಣ್ತುಂಬಿಕೊಂಡಿದ್ದಾರೆ.

ಆಗಸ್ಟ್ 30 ರಂದು ಕಾಣಿಸಿಕೊಳ್ಳುವ ಸೂಪರ್ ಬ್ಲೂ ಮೂನ್ ಖಗೋಳ ಘಟನೆಯಾಗಿದ್ದು, ಇದು 10 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಬಾಹ್ಯಾಕಾಶದಲ್ಲಿ ಚಂದ್ರನೊಂದಿಗೆ ಸಂಭವಿಸುವ ಇದೇ ರೀತಿಯ ಖಗೋಳ ಘಟನೆಗಳನ್ನು ಬ್ಲೂ ಮೂನ್, ನ್ಯೂ ಮೂನ್, ಫುಲ್ ಮೂನ್, ಸೂಪರ್ ಮೂನ್ ಎಂದೂ ಕರೆಯಲಾಗುತ್ತದೆ.

ಅದೇ ರೀತಿ ಇಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ, ಅಸ್ಸಾಂನ ಗುವಾಹಟಿ ಸೇರಿದಂತೆ ವಿವಿಧ ಕೆಲವು ರಾಜ್ಯಗಳಲ್ಲಿ ಸೂಪರ್ ಮೂನ್ ಕಾಣಿಸಿಕೊಂಡಿದೆ. ಕೆಲವೆಡೆ ಮಳೆ ಮೋಡದ ವಾತಾವರಣದಿಂದಾಗಿ ನಿರಾಸೆ ಮೂಡಿಸಿದೆ. 

ಸೂಪರ್ ಬ್ಲೂ ಮೂನ್ ಸಾಮಾನ್ಯ ದಿನಗಳಿಗಿಂತ 14 ಪ್ರತಿಶತ ದೊಡ್ಡದಾಗಿ ಮತ್ತು 30 ಪ್ರತಿಶತ ಪ್ರಕಾಶಮಾನವಾಗಿ ಕಾಣುತ್ತದೆ. ಇಂದು ಯಾವುದೇ ಉಪಕರಣಗಳಿಲ್ಲದೇ ಸೂಪರ್ ಬ್ಲೂ ಮೂನ್ ಅನ್ನು ಸುಲಭವಾಗಿ ನೋಡಬಹುದು. ಚಂದ್ರನು ನೀಲಿ ಬಣ್ಣದಲ್ಲಿ ಕಾಣುವುದಿಲ್ಲ, ಅದು ಸ್ವಲ್ಪ ತಿಳಿ ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತದೆ.

ಸುತ್ತಲೂ ಸಾಕಷ್ಟು ಮಾಲಿನ್ಯವಿದ್ದಾಗ, ಇದರಿಂದಾಗಿ ಧೂಳಿನ ಕಣಗಳು ಗಾಳಿಯಲ್ಲಿ ಹರಡಿಕೊಂಡಿದ್ದರೆ ಮಾತ್ರ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬ್ಲೂ ಮೂನ್ ಅಥವಾ ಸೂಪರ್ ಬ್ಲೂ ಮೂನ್ ನಲ್ಲಿ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದರಂತೆ ಅಲ್ಲಲ್ಲಿ ಚಂದಿರನ ಕೌತುಕದ ದರ್ಶನವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments