Select Your Language

Notifications

webdunia
webdunia
webdunia
webdunia

ಶಶಿಕಲಾ ಬಗ್ಗೆ ಇನ್ನೊಂದು ಬಾಂಬ್ ಸಿಡಿಸಿದ ಪನೀರ್ ಸೆಲ್ವಂ

ಶಶಿಕಲಾ ಬಗ್ಗೆ ಇನ್ನೊಂದು ಬಾಂಬ್ ಸಿಡಿಸಿದ ಪನೀರ್ ಸೆಲ್ವಂ
Chennai , ಶನಿವಾರ, 4 ಮಾರ್ಚ್ 2017 (10:03 IST)
ಚೆನ್ನೈ: ಶಶಿಕಲಾ ನಟರಾಜನ್ ಬಗ್ಗೆ ಆರೋಪಗಳ ಪಟ್ಟಿ ಮಾಡುತ್ತಿರುವ ಅಮ್ಮ ಜಯಲಲಿತಾ ಬಂಟ ಪನೀರ್ ಸೆಲ್ವಂ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.


ಜಯಲಲಿತಾ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿದ್ದರೂ, ಸುಧಾರಿಸಿಕೊಳ್ಳದಿರುವಾಗ, ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಲು ಸೆಲ್ವಂ ಚಿಂತಿಸಿದ್ದರಂತೆ. ಆದರೆ ಶಶಿಕಲಾ ಒಪ್ಪಿಗೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರತೀ ದಿನ ಆಸ್ಪತ್ರೆಗೆ ಜಯಲಲಿತಾರನ್ನು ವಿಚಾರಿಸಲು ಬರುತ್ತಿದ್ದರೂ, ಒಂದು ದಿನವೂ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ದೂರಿದ್ದಾರೆ.

ಅವರ ಆರೋಗ್ಯ ಸ್ಥಿತಿ ಬಗ್ಗೆ, ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಅದರ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ಸದ್ಯ ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿತರಾಗಿರುವ ಪನೀರ್ ಸೆಲ್ವಂ ಶಶಿಕಲಾ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಗಂಗಾ ನದಿಗೆ ಹಾರಲಿ, ಇಲ್ಲ ನಾನು ಹಾರುತ್ತೇನೆ: ಉಮಾಭಾರತಿ