Select Your Language

Notifications

webdunia
webdunia
webdunia
webdunia

ಚಿನ್ನಮ್ಮನ ಭೇಟಿಯಾಗಲಿರುವ ಪಳನಿ ಸ್ವಾಮಿ

ಚಿನ್ನಮ್ಮನ ಭೇಟಿಯಾಗಲಿರುವ ಪಳನಿ ಸ್ವಾಮಿ
ಚೆನ್ನೈ , ಶುಕ್ರವಾರ, 17 ಫೆಬ್ರವರಿ 2017 (08:40 IST)
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಪಳನಿಸ್ವಾಮಿ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಿದ್ದಾರೆ. ಪಳನಿಸ್ವಾಮಿ ಜತೆ ನಿನ್ನೆ ಅಧಿಕಾರ ಸ್ವೀಕರಿಸಿರುವ ಇತರ ಸಚಿವರು ಸಹ ಆಗಮಿಸುವ ಸಾಧ್ಯತೆಗಳಿವೆ.

ನಿನ್ನೆ ಅಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪಳನಿಸ್ವಾಮಿ ನಾಳೆ ವಿಶ್ವಾಸಮತ ಸಾಬೀತುಪಡಿಸಬೇಕಿರುವುದರಿಂದ ಈ ಕುರಿತು ಚರ್ಚಿಸಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
 
ಇನ್ನು ಅಕ್ರಮ ಆಸ್ತಿ ಪ್ರಕರಣದಡಿಯಲ್ಲಿ ಜೈಲು ಸೇರಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಮೇಲೆ ಜೈಲಿನಲ್ಲಿ ಹಲ್ಲೆಯಾಗುವ ಭೀತಿ ಇರುವುದರಿಂದ ಅವರಿರುವ ಸೆಲ್‌ಗೆ ಬಿಗಿ ಭದ್ರತೆ ನೀಡಲಾಗಿದೆ.ಜೈಲಿನಲ್ಲಿರುವ ತಮಿಳು ಖೈದಿಗಳಿಂದ ಶಶಿಕಲಾ ಅವರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
 
ಹೇಗಿತ್ತು ಶಶಿಕಲಾ ದಿನಚರಿ: ಇಂದು ಮುಂಜಾನೆ 6 ಗಂಟೆಗೆ ಹಾಸಿಗೆಯಿಂದ ಎದ್ದ ಶಶಿಕಲಾ 6.30ರವರೆಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಜೈಲಿನ ಮೆನುವಿನಂತೆ ಟೀ ಕುಡಿದು ಟೊಮೆಟೋ ಬಾತ್ ಸೇವಿಸಿದ ಅವರೀಗ ಪಳನಿಸ್ವಾಮಿ ಭೇಟಿಗೆ ಕಾದು ಕುಳಿತಿದ್ದಾರೆ.
 
ಪಳನಿಸ್ವಾಮಿ ಜತೆ ನಿನ್ನೆ ಅಧಿಕಾರ ಸ್ವೀಕರಿಸಿರುವ ಇತರ ಸಚಿವರು ಸಹ ಆಗಮಿಸುವ ಸಾಧ್ಯತೆಗಳಿವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ಅಪಹರಿಸಿ ನೆರೆರಾಜ್ಯದಲ್ಲಿ ಕೂಡಿಟ್ಟು ಗ್ಯಾಂಗ್ ರೇಪ್ ನಡೆಸಿದ ಬಾಲಕರು