Webdunia - Bharat's app for daily news and videos

Install App

ದರೋಡೆ ನಾಟಕವಾಡಿದ ಆಭರಣ ಅಂಗಡಿ ಮಾಲೀಕರ ವಿರುದ್ಧ ಕೇಸ್

Webdunia
ಭಾನುವಾರ, 8 ಮೇ 2016 (18:57 IST)
14 ಕೋಟಿ ರೂ. ಚಿನ್ನಾಭರಣ ಕಳೆದ ವಾರ ದರೋಡೆಯಾದ ಆಭರಣ ಅಂಗಡಿಯ ಮಾಲೀಕರ ವಿರುದ್ಧ ಪೊಲೀಸರು ಕೇಸ್ ಫೈಲ್ ಮಾಡಿದ್ದಾರೆ. 10 ಕೋಟಿ ರೂ.  ಇನ್ಷೂರೆನ್ಸ್ ಹಣವನ್ನು ಹೊಡೆಯುವುದಕ್ಕಾಗಿ ಮಾಲೀಕರೇ ಈ ದರೋಡೆಯ ನಾಟಕವಾಡಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ. ವಿನೋದ್ ಮತ್ತು ರಜನೀಶ್ ಎಂಬ ಇಬ್ಬರು ಸೋದರರು ಶೋರೂಂ ಮಾಲೀಕರಾಗಿದ್ದು, ಚಂದೀಘಡದ ಐಷಾರಾಮಿ ಮಾರುಕಟ್ಟೆಯಲ್ಲಿ ಇವರ ಶೋರೂಂ ಇದೆ. ವಿಮೆ ಹಣ ಹೊಡೆಯುವುದಕ್ಕಾಗಿ ಇಡೀ ನಾಟಕವನ್ನು ಇವರಿಬ್ಬರು ರೂಪಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರ ಸಂಬಂಧಿಗಳು ಈ ದರೋಡೆಯ ನಾಟಕವಾಡಿದ್ದು, ಪುರಾವೆಗಳ ನಾಶಕ್ಕೆ ಅವರ ಪೈಕಿ ಒಬ್ಬ ಸಿಸಿಟಿವಿ ಮೆಮರಿ ಕಾರ್ಡ್ ಅಡಗಿಸಿಟ್ಟ. ಹಾಡು ಹಗಲಿನಲ್ಲಿ ಈ ನಕಲಿ ದರೋಡೆ ನಡೆದಿದ್ದು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಆಗಮಿಸುತ್ತಾರೆ.
 
ಅವರು ಭದ್ರತಾ ಸಿಬ್ಬಂದಿ ಮತ್ತು 6 ಸಿಬ್ಬಂದಿಗೆ ಪಿಸ್ತೂಲು ತೋರಿಸಿ ಕೂಡಿಹಾಕಿ ಚಿನ್ನಾಭರಣ ಮತ್ತು ಆಭರಣ ದೋಚುತ್ತಾರೆ. ಶನಿವಾರ ಗ್ಯಾಂಗ್ ಉಂಗುರು ಬುಕ್ ಮಾಡಿ ಅದನ್ನು ಖರೀದಿಸಲು ಭಾನುವಾರ ಆಗಮಿಸಿ ಅಂಗಡಿಯನ್ನು ದೋಚಿದ್ದರು. ಆದರೆ ಇಬ್ಬರು ಮಾಲೀಕರು ಪೊಲೀಸರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ಸೇರಿದ್ದರಿಂದ ಪೊಲೀಸರು ಅನುಮಾನಗೊಂಡು ಅಂಗಡಿ ಮ್ಯಾನೇಜರ್ ಮೇಲೆ ಒತ್ತಡಹಾಕಿದಾಗ ಅವನು ತಪ್ಪೊಪ್ಪಿಗೆ ಹೇಳಿಕೆ ನೀಡಿದ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

ಮುಂದಿನ ಸುದ್ದಿ
Show comments