ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಎನ್ಎಸ್ ಪಿ ಮಾತೃ ವಾತ್ಸಲ್ಯ ಯೋಜನೆ ಜಾರಿಗೆ: ಇಲ್ಲಿದೆ ವಿವರ

Krishnaveni K
ಬುಧವಾರ, 18 ಸೆಪ್ಟಂಬರ್ 2024 (11:59 IST)
ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಘೋಷಿಸಿದ ಜನಪ್ರಿಯ ಯೋಜನೆಯಲ್ಲಿ ಎನ್ಎಸ್ ಪಿ ಮಾತೃವಾತ್ಸಲ್ಯ ಯೋಜನೆಯೂ ಒಂದು. ಈ ಯೋಜನೆಯನ್ವಯ ನಿಮ್ಮ ಮಕ್ಕಳ ಭವಿಷ್ಯ ಸದೃಢಗೊಳಿಸಬಹುದಾಗಿದೆ. ಈ ಯೋಜನೆಯ ವಿವರ ಇಲ್ಲಿದೆ.

ಯಾವುದೇ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಅವರ ತಂದೆ ತಾಯಿ ಅಥವಾ ಪಾಲಕರು ಎನ್ ಎಸ್ ಪಿ ವಾತ್ಸಲ್ಯ ಖಾತೆ ಆರಂಭಿಸಬಹುದು. ಮಕ್ಕಳು ಪ್ರಾಪ್ತ ವಯಸ್ಸಿಗೆ ಅಂದರೆ 18 ವರ್ಷ ವಯಸ್ಸಿಗೆ ಬಂದ ಮೇಲೆ ಆ ಖಾಥೆ ಎನ್ ಎಸ್ ಪಿ ಖಾತೆಯಾಗಿ ಪರಿವರ್ತನೆಯಾಗುತ್ತದೆ.

ಮಗು ದೊಡ್ಡವರಾದ ಮೇಲೆ ತಾನೇ ಆ ಖಾತೆಯನ್ನು ನಿಭಾಯಿಸಿಕೊಂಡು ಹೋಗಬಹುದು. ಇದು ಆ ಮಗುವಿನ ಭವಿಷ್ಯಕ್ಕೆ ಒಂದಷ್ಟು ಹಣ ಕೂಡಿಟ್ಟಂತಾಗುತ್ತದೆ. ಮಕ್ಕಳಲ್ಲೂ ಹಣಕಾಸಿನ ಕೂಡುವಿಕೆ ಬಗ್ಗೆ ಜಾಗೃತಿ ಮೂಡಲಿ ಎಂಬ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಂದಿನಿಂದ ಈ ಯೋಜನೆ ಜಾರಿಗೆ ಬರಲಿದೆ.

ನ್ಯಾಷನಲ್ ಪೆನ್ಷನ್ ಸಿಸ್ಟಂ ಎನ್ನುವುದು ಮೊದಲು ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಉದ್ಯೋಗಿಗಳು ತಮ್ಮ ಮಕ್ಕಳ ಹೆಸರಿನಲ್ಲೂ ಖಾತೆ ತೆರೆದು ತಮ್ಮ ಮಕ್ಕಳ ಖಾತೆಗೆ ಸೇರಿಸಬಹುದು. ಈ ಮೊದಲು ಇದು 18-70 ವರ್ಷದೊಳಗಿನವರಿಗೆ ಮಾತ್ರ ಸೀಮಿತವಾಗಿತ್ತು. ಈಗ ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದಾಗಿದೆ.

ಈ ಮೊದಲು ಉದ್ಯೋಗಿಗಳು ತಮ್ಮ ವೇತನ ಶೇ.10 ರಷ್ಟನ್ನು ಎನ್ಎಸ್ ಪಿ ಖಾತೆಗೆ ಹಾಕಬಹುದಾಗಿತ್ತು. ಈಗ ಇದನ್ನು ಶೇ.14 ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಕಂಪನಿಯು ಉದ್ಯೋಗಿಯ ಎನ್ಎಸ್ ಪಿ ಖಾತೆಗೆ ಹಣ ಹಾಕುವುದು ಕಡ್ಡಾಯವಲ್ಲ. ಇದು ಆಯಾ ಕಂಪನಿಯ ಐಚ್ಛಿಕ ಆಯ್ಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಸ್ಪರ್ಧಾತ್ಮಕ ಪರೀಕ್ಷೆಗೆ ಹೊರಟ್ಟಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣು

ದೆಹಲಿ ವಾಯುಮಾಲಿನ್ಯ: ನಾಳೆ ಶಾಲೆಗೆ ರಜೆ ಘೋಷಣೆ, 50% ಮನೆಯಿಂದ ಕೆಲಸಕ್ಕೆ ಅನುಮತಿ

ರಾಜ್ಯದಲ್ಲಿ 13ಲಕ್ಷ ಕಾರ್ಡುಗಳು ಅನರ್ಹ, ಸಚಿವ ಕೆಎಚ್ ಮುನಿಯಪ್ಪ ಕೊಟ್ಟ ಸಲಹೆ ಏನು

ಗೃಹಲಕ್ಷ್ಮಿ ಮಾಹಿತಿ ಕೊಡಲು ಅಧಿಕಾರಿಗಳು ಅಂಜುತ್ತಿರುವುದೇಕೆ: ಮಹೇಶ್ ಟೆಂಗಿನಕಾಯಿ

ಮುಂದಿನ ಸುದ್ದಿ
Show comments