Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶದಲ್ಲಿನ್ನು ಶಾಸಕರು ಶಾಲೆಗಳನ್ನು ದತ್ತು ತೆಗೆದುಕೊಳ್ಳಲೇಬೇಕು!

ಉತ್ತರ ಪ್ರದೇಶದಲ್ಲಿನ್ನು ಶಾಸಕರು ಶಾಲೆಗಳನ್ನು ದತ್ತು ತೆಗೆದುಕೊಳ್ಳಲೇಬೇಕು!
Luknow , ಮಂಗಳವಾರ, 27 ಜೂನ್ 2017 (09:06 IST)
ಲಕ್ನೋ: ಪ್ರಧಾನಿ ಮೋದಿಯವರ ಕನಸಿನ ಕೂಸು ಸಂಸದ ಆದರ್ಶ ಗ್ರಾಮ ಯೋಜನೆ. ಅದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹಿಂದುಳಿದ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವಂತೆ ಶಾಸಕರಿಗೆ ಆದೇಶಿಸಿದ್ದಾರೆ.

 
ಸಂಸದರು ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಸಂಸದರ ನಿಧಿ ಬಳಸಿ ಗ್ರಾಮಗಳಿಗೆ ಸೌಲಭ್ಯ ನೀಡುವ ಯೋಜನೆಯಂತೆಯೇ ಈ ಯೋಜನೆಯೂ ಇದೆ. ಸೌಲಭ್ಯ, ಸೌಕರ್ಯಗಳಲ್ಲಿ ತೀರಾ ಹಿಂದುಳಿದ ಶಾಲೆಗಳನ್ನು ದತ್ತು ತೆಗೆದುಕೊಂಡು ಒಂದು ವರ್ಷದೊಳಗೆ ಅಭಿವೃದ್ಧಿ ಪಡಿಸುವಂತೆ ಸಿಎಂ ಯೋಗಿ ಶಾಸಕರು, ಪಕ್ಷದ ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಮೂಲಕ ಸೌಲಭ್ಯ ವಂಚಿತ ಶಾಲೆಗಳನ್ನು ಗುಣಮಟ್ಟದ ಶಾಲೆಗಳನ್ನಾಗಿಸಿ ಶಿಕ್ಷಣದ ಮಟ್ಟ ಸುಧಾರಿಸುವ ಪ್ರಯತ್ನ ಮಾಡಲಿದ್ದಾರೆ. ಇದೊಂದು ನಿಜಕ್ಕೂ ಆದರ್ಶ ಕಾರ್ಯಕ್ರಮವಾಗಿದ್ದು, ತಳ ಮಟ್ಟದ ಶಿಕ್ಷಣ ಅಭಿವೃದ್ಧಿಗೆ ಪೂರಕವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಗಡಿಯೊಳಕ್ಕೆ ನುಗ್ಗಿದ ಚೀನೀ ಸೈನಿಕರು