Select Your Language

Notifications

webdunia
webdunia
webdunia
webdunia

ಸೋಲು ಶಾಶ್ವತವಲ್ಲ, ಸಿದ್ಧಾಂತಗಳನ್ನು ಮರೆಯದಿರಿ: ಕಾಂಗ್ರೆಸ್ಸಿಗರಿಗೆ ಸೋನಿಯಾ ಕಿವಿಮಾತು

ಸೋಲು ಶಾಶ್ವತವಲ್ಲ, ಸಿದ್ಧಾಂತಗಳನ್ನು ಮರೆಯದಿರಿ: ಕಾಂಗ್ರೆಸ್ಸಿಗರಿಗೆ ಸೋನಿಯಾ ಕಿವಿಮಾತು
ನವದೆಹಲಿ , ಶನಿವಾರ, 21 ಮೇ 2016 (18:52 IST)
ಸೋಲು ಯಾವತ್ತೂ ಶಾಶ್ವತವಲ್ಲ. ಆದರೆ, ಸಿದ್ದಾಂತಗಳಿಗೆ ತಿಲಾಂಜಲಿ ಇಡಬೇಡಿ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕಿವಿಮಾತು ಹೇಳಿದ್ದಾರೆ.
 
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸಿದ್ದಾಂತಗಳನ್ನು ಮುಂದುವರಿಸಿದಲ್ಲಿ ಸೋಲು ಶಾಶ್ವತವಲ್ಲ ಎನ್ನುವುದನ್ನು ಮರೆಯಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ. 
 
ಮಾಜಿ ಪ್ರಧಾನಿ, ಪತಿ ದಿವಂಗತ ರಾಜೀವ್ ಗಾಂಧಿಯವರ 25ನೇ ಪುಣ್ಯತಿಥಿ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡುತ್ತಿದ್ದರು.
 
ಇತ್ತಿಚೆಗೆ ನಡೆದ ಕಾಂಗ್ರೆಸ್ ಆಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು  ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ  ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದರೂ ಸಾಮಾಜಿಕ ಸಾಮರಸ್ಯತೆಯನ್ನು ಕಾಪಾಡಲು ರಾಜೀವ್ ಗಾಂಧಿಯವರ ಒಂದೊಂದು ಹನಿ ರಕ್ತ ಬಳಕೆಯಾಗಬೇಕು ಎಂದರು. 
 
ಕಾಂಗ್ರೆಸ್ಸಿಗರು ಸರಳತೆ, ಆಧುನಿಕ ಚಿಂತನೆ, ಸಾಮರಸ್ಯತೆ ಮತ್ತಿ ಸೂಕ್ಷ್ಮತೆಯನ್ನು ಅಳವಡಿಸಿಕೊಂಡಲ್ಲಿ ನಾವು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗೆ ಇದ್ದೇವೆ ಎಂಬಂತೆ ಭಾಸವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಮತಾ ಪ್ರಮಾಣ ವಚನಕ್ಕೆ ಮೋದಿ, ಶೇಖ್ ಹಸೀನಾ, ಕೇಜ್ರಿವಾಲ್‌ಗೆ ಆಹ್ವಾನ