Select Your Language

Notifications

webdunia
webdunia
webdunia
webdunia

ಮತ್ತೆ ಹೊಸ ನಾಟಕ ಶುರು ಮಾಡಿದ ನಿರ್ಭಯಾ ಅಪರಾಧಿ

ಮತ್ತೆ ಹೊಸ ನಾಟಕ ಶುರು ಮಾಡಿದ ನಿರ್ಭಯಾ ಅಪರಾಧಿ
ನವದೆಹಲಿ , ಶನಿವಾರ, 18 ಜನವರಿ 2020 (09:57 IST)
ನವದೆಹಲಿ: ಜನವರಿ 22 ಕ್ಕೆ ಗಲ್ಲು ಶಿಕ್ಷೆ ಎಂದಿದ್ದು, ಇದೀಗ ಫೆಬ್ರವರಿ 1 ಕ್ಕೆ ಮುಂದೂಡಿಕೆಯಾದರೂ ನಿರ್ಭಯಾ ಅಪರಾಧಿಗಳು ತಮ್ಮ ಶಿಕ್ಷೆ ದಿನ ಮುಂದೂಡಲು ಎಲ್ಲಾ ಹರಸಾಹಸವನ್ನೂ ಮಾಡುತ್ತಿದ್ದಾರೆ.


ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ಬಳಿಕ ಫೆಬ್ರವರಿ 1 ಕ್ಕೆ ಗಲ್ಲು ಶಿಕ್ಷೆ ಜಾರಿ ಮಾಡಲು ವಾರಂಟ್ ನೀಡಲಾಗಿದೆ. ಆದರೆ ಇದೀಗ ಇನ್ನೊಬ್ಬ ಆರೋಪಿ ಪವನ್ ಗುಪ್ತಾ ಹೊಸ ಆಟ ಶುರು ಮಾಡಿದ್ದಾನೆ.

ಪ್ರಕರಣದ ಸಂದರ್ಭದಲ್ಲಿ ತನಗೆ 18 ವರ್ಷ ಪೂರ್ತಿಯಾಗಿರಲಿಲ್ಲ. ಹೀಗಾಗಿ ತನ್ನನ್ನು ಬಾಲಾಪರಾಧಿ ವರ್ಗದಲ್ಲಿ ಪರಿಗಣಿಸಿ ಶಿಕ್ಷೆ ಕಡಿತಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಹೊಸದಾಗಿ ಅರ್ಜಿ ಹಾಕಿದ್ದಾನೆ. ಇದೀಗ ಆ ಅರ್ಜಿಯ ವಿಚಾರಣೆ ನಡೆಯಬೇಕಿದೆ. ಈ ಮೂಲಕ ತಮಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಮತ್ತಷ್ಟು ಮುಂದೂಡಲು ಅಪರಾಧಿಗಳು ಒಬ್ಬೊಬ್ಬರಾಗಿ ಅರ್ಜಿ ಸಲ್ಲಿಸುವ ನಾಟಕ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಧಿ ಮುಗಿದ ಟೀ ಪುಡಿ ಖರೀದಿಸುವಂತೆ ರೈತರಿಗೆ ಅಧಿಕಾರಿಗಳಿಂದ ಒತ್ತಡ!