Select Your Language

Notifications

webdunia
webdunia
webdunia
webdunia

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ರಾಹುಲ್ ಗಾಂಧಿ

Narrow Escape
ಆಗ್ರಾ , ಭಾನುವಾರ, 2 ಅಕ್ಟೋಬರ್ 2016 (13:47 IST)
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ವಿದ್ಯುತ್ ಅವಘಡವೊಂದರಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದಲ್ಲಿ ಕಿಶಾನ್ ಮಹಾಯಾತ್ರೆ ನಡೆಸುತ್ತಿರುವ ಅವರು ನಿನ್ನೆ ತಾಜ್ ಸಿಟಿ ಆಗ್ರಾದಲ್ಲಿ ಮಹಾರಾಜ ಅಗ್ರಸೇನ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಯೇ  ಹಾದುಹೋಗಿದ್ದ ವಿದ್ಯುತ್ ತಂತಿಯೊಂದು  ಅವರ ತಲೆಗೆ ತಾಗಿದೆ. ಆತಂಕಗೊಂಡ ಅವರು ತಕ್ಷಣ  ಹಿಂದಕ್ಕೆ ಬಾಗಿದ್ದಾರೆ.  ಹೀಗಾಗಿ ಸಮತೋಲನ ತಪ್ಪಿ ಬೀಳಲಾದ ಅವರನ್ನು ತಕ್ಷಣ ಪಕ್ಕದಲ್ಲಿ ನಿಂತವರು ಹಿಡಿದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 
 
ಏನು ತೊಂದರೆ ಆಗಿಲ್ಲ ತಾನೇ?  ಎಂದು ಪ್ರಶ್ನಿಸಿದ ಪಕ್ಷದ ನಾಯಕ ರಾಜ್ ಬಬ್ಬರ್ ಅವರಿಗೆ ರಾಹುಲ್, ನೀವು ನನಗೆ ವಿದ್ಯುತ್ ಶಾಕ್ ತಗಲಿಸಿಬಿಟ್ಟಿರಿ ಎಂದು ತಮಾಷೆ ಮಾಡಿದರು.
 
ತಂತಿ ತಗುಲಿದ ತಕ್ಷಣ ರಾಹುಲ್ ಅಲ್ಲೇ ಇದ್ದ ಪುರೋಹಿತರ ಬಳಿ ಏನೋ ಮಾತನಾಡುತ್ತಿದ್ದುದು ಕಂಡು ಬಂತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಾತ್ಮಾ ಗಾಂಧಿ, ಶಾಸ್ತ್ರಿ ಜನ್ಮದಿನ: ಪ್ರಧಾನಿ ಗೌರವ ಸಮರ್ಪಣೆ