Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿಯನ್ನು ಕಂಡು ಗಳ ಗಳನೆ ಅತ್ತ ಪನ್ನೀರ್ ಸೆಲ್ವಂ

ನರೇಂದ್ರ ಮೋದಿಯನ್ನು ಕಂಡು ಗಳ ಗಳನೆ ಅತ್ತ ಪನ್ನೀರ್ ಸೆಲ್ವಂ
Chennai , ಮಂಗಳವಾರ, 6 ಡಿಸೆಂಬರ್ 2016 (13:42 IST)
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ನಿಧನರಾದ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ  ಅಂತಿಮ ದರ್ಶನ ಪಡೆದರು. ವಿಶೇಷ ವಿಮಾನದಲ್ಲಿ ಚೆನ್ನೈ ತಲುಪಿದ ಮೋದಿ ಜಯಲಲಿತಾ ಆಪ್ತರನ್ನು ಸಮಾಧಾನಿಸಿದರು.

ಮೋದಿಯನ್ನು ಕಂಡಕೂಡಲೇ ಗಳ ಗಳನೆ ಅತ್ತ ಜಯಲಲಿತಾ ಆಪ್ತ ಮುಂದಿನ ಸಿಎಂ ಪನ್ನೀರ್ ಸೆಲ್ವಂರನ್ನು ಅಪ್ಪಿ ಸಮಾಧಾನಿಸಿದರು. ಅಲ್ಲದೆ ನೆರೆದ ಜನಸ್ತೋಮದತ್ತ ಕೈ ಮುಗಿದು ಮೋದಿ ಅಲ್ಲಿಂದ ತೆರಳಿದ್ದಾರೆ.

ಈಗಾಗಲೇ ಸ್ಥಳದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬೀಡು ಬಿಟ್ಟಿದ್ದಾರೆ. ಅನೇಕ ರಾಜಕೀಯ ನಾಯಕರು ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯಕೂಡಾ ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಿದ್ದಾರೆ.

ಈಗಾಗಲೇ ಮರೀನಾ ಬೀಚ್ ಬಳಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಇಲ್ಲೂ ಜನ ಈಗಲೇ ಸೇರಿದ್ದು, ಆದಷ್ಟು ಸಿದ್ಧತೆಗೆ ಅಗತ್ಯವಿದ್ದವರನ್ನು ಮಾತ್ರ ಇಲ್ಲಿ ಉಳಿಸಿಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋಗೆ ಶಾಕ್: ಬಿಎಸ್‌ಎನ್‍ಎಲ್ ಫ್ರೀ ಆಫರ್