Select Your Language

Notifications

webdunia
webdunia
webdunia
webdunia

ಗೋ ಸಾಗಣೆ ಮಾಡುತ್ತಿದ್ದಾಗ ಹಲ್ಲೆಗೊಳಗಾದ ವ್ಯಕ್ತಿ ಸಾವು

ಗೋ ಸಾಗಣೆ ಮಾಡುತ್ತಿದ್ದಾಗ ಹಲ್ಲೆಗೊಳಗಾದ ವ್ಯಕ್ತಿ ಸಾವು
Rajasthan , ಬುಧವಾರ, 5 ಏಪ್ರಿಲ್ 2017 (11:48 IST)
ರಾಜಸ್ಥಾನ: ಗೋ ಸಾಗಣಿಕೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ಗೋ ರಕ್ಷಕರ ಗ್ಯಾಂಗ್ ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟ ಘಟನೆ ರಾಜಸ್ಥಾನದ ಆಲ್ವರ್ ಜಿಲ್ಲೆಯಲ್ಲಿ ನಡೆದಿದೆ.

 

58 ವರ್ಷದ ಪೆಹ್ಲುಖಾನ್ ಮೃತಪಟ್ಟ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋ ಸಾಗಣಿಕೆ ಮಾಡುತ್ತಿದ್ದ ಪೆಹ್ಲು ಖಾನ್ ಮತ್ತು ಸದಸ್ಯರ ಮೇಲೆ ಏಕಾ ಏಕಿ ದಾಳಿ ನಡೆಸಿದ 15 ಜನರ ತಂಡ ತೀವ್ರವಾಗಿ ಗಾಯಗೊಳಿಸಿತು. ಪರಿಣಾಮ, ಆಸ್ಪತ್ರೆಗೆ ದಾಖಲಾದ ಪೆಹ್ಲು ಖಾನ್ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

 
ಹಲ್ಲೆ ನಡೆಸಿದವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದೆ. ಈ ಬಗ್ಗೆ ಆರು ಜನರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ರಾಜಸ್ಥಾನ ಕಾನೂನಿನ ಪ್ರಕಾರ  ಗೋವುಗಳನ್ನು ಕಸಾಯಿಖಾನೆಗೆ ಸಾಗಣಿಕೆ ಮಾಡುವುದು ನಿಷಿದ್ಧವಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟ್ಟರ್`ನಲ್ಲಿ ಬೆಂಗಳೂರು ಯುವಕನನ್ನ ಫಾಲೋ ಮಾಡುತ್ತಿರುವ ಮೋದಿ.