Select Your Language

Notifications

webdunia
webdunia
webdunia
webdunia

ಮುಲಾಯಂಗೆ ಅಖಿಲೇಶ್ ಮೇಲೆ ಅಸೂಯೆಯಂತೆ!

ಮುಲಾಯಂಗೆ ಅಖಿಲೇಶ್ ಮೇಲೆ ಅಸೂಯೆಯಂತೆ!
ನವದೆಹಲಿ , ಮಂಗಳವಾರ, 25 ಅಕ್ಟೋಬರ್ 2016 (15:22 IST)
ಸಮಾಜವಾದಿ ಪಕ್ಷದೊಳಗಿನ ಆಂತರಿಕ ಭಿನ್ನಮತ ಇಂದು ಕೂಡ ಮುಂದುವರೆದಿದ್ದು, ಪಕ್ಷದಿಂದ ವಜಾಗೊಂಡಿರುವ ಶಾಸಕ ರಾಮ್ ಗೋಪಾಲ್ ಯಾದವ್ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ತಮ್ಮ ಮಗ, ಯುಪಿ ಸಿಎಂ ಅಖಿಲೇಶ್ ಯಾದವ್ ಅವರ ಜನಪ್ರಿಯತೆ ಕಂಡು ಅಸೂಯೆಯಾಗಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. 

ಜತೆಗೆ ಅಖಿಲೇಶ್ ಇಲ್ಲದೆ ಸಮಾಜವಾದಿ ಪಕ್ಷ ಕೂಡ ಇಲ್ಲ. ಅವರೇ ಮುಂದಿನ ಸಿಎಂ ಆಗುವುದನ್ನು ಖಚಿತಪಡಿಸುವುದೇ ನನ್ನ ಏಕೈಕ ಗುರಿ ಎಂದು ವರ್ಮಾ ಘೋಷಿಸಿದ್ದಾರೆ. 
 
ತಾನು ಹೆತ್ತ ಪುತ್ರ ತನಗಿಂತ ಹೆಚ್ಚು ಏಳಿಗೆ ಕಾಣಬೇತು ಎಂದು ಎಲ್ಲ ತಂದೆ ಬಯಸುತ್ತಾರೆ. ಆದರೆ ಇಲ್ಲಾಗುತ್ತಿರುವುದು ತದ್ವಿರುದ್ಧ. ಹೀಗಾಗಬಾರದಿತ್ತು. ನಿಜಕ್ಕೂ ಇದು ಬೇಸರದ ಸಂಗತಿಯೇ ಸರಿ ಎಂದು ಸಂಬಂಧದಲ್ಲಿ ಮುಲಾಯಂ ದಾಯಾದಿ ಸಹೋದರ,  ಅಖಿಲೇಶ್ ಚಿಕ್ಕಪ್ಪನಾಗಿರುವ ವರ್ಮಾ ಖೇದ ವ್ಯಕ್ತ ಪಡಿಸಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನದಲ್ಲಿ ಮುಲಾಯಂ ಮತ್ತು ಸಹೋದರ ಶಿವಪಾಲ್ ಯಾದವ್ ಒಂದು ಬಣವಾಗಿದ್ದರೆ, ಅಖಿಲೇಶ್ ಮತ್ತು ಮುಲಾಯಂ ದಾಯಾದಿ ಸಹೋದರ ರಾಮ್ ಗೋಪಾಲ್ ಯಾದವ್ ಮತ್ತೊಂದು ಬಣವಾಗಿದ್ದಾರೆ.
 
ಜಾದೂಗಾರರು ನೇತಾಜಿ ಮನಸ್ಸಿಗೆ ವಿಷ ಉಣಿಸಿದ್ದಾರೆ ಎಂದು ರಾಮ್ ಗೋಪಾಲ್ ಕಟುವಾಗಿ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ 8% ಜನರು ಮಾನಸಿಕ ರೋಗಿಗಳು