Select Your Language

Notifications

webdunia
webdunia
webdunia
webdunia

ರಾಜೀನಾಮೆ ಕೊಡುತ್ತೇನೆಂದು ರಾಜ್ಯಸಭೆಯಿಂದ ಹೊರನಡೆದ ಮಾಯಾವತಿ

ರಾಜೀನಾಮೆ ಕೊಡುತ್ತೇನೆಂದು ರಾಜ್ಯಸಭೆಯಿಂದ ಹೊರನಡೆದ ಮಾಯಾವತಿ
ರಾಜ್ಯಸಭೆ , ಮಂಗಳವಾರ, 18 ಜುಲೈ 2017 (12:32 IST)
ಗೋರಕ್ಷಣೆ ನೆಪದಲ್ಲಿ ದಲಿತರ ಮೇಲಿನ ದೌರ್ಜನ್ಯ ಕುರಿತಂತೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ರಾಜ್ಯಸಭಾ ಸದಸ್ಯೆ ಮಾಯಾವತಿ ರಾಜೀನಾಮೆ ನೀಡುವುದಾಗಿ ರಾಜ್ಯಸಭೆಯಿಂದ ಹೊರಗೆ ಹೋದ ಘಟನೆ ನಡೆದಿದೆ.
 

ಗೋರಕ್ಷಣೆ ಹೆಸರಲ್ಲಿ ದಲಿತರ ಮೇಲೆ ಹಲ್ಲೆ, ಹತ್ಯೆಯಂತಹ ದೌರ್ಜನ್ಯಗ:ು ನಡೆಯುತ್ತಿವೆ ಎಂದು ಮಾಯಾವತಿ ಮಾತನಾಡಲು ನಿಂತಾಗ ಆಡಳಿತ ಪಕ್ಷದಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಕೋಪಗೊಂಡ ಮಾಯಾವತಿ,
ನನಗೆ ಮಾತನಾಡಲು ಈಗ ಅವಕಾಶ ನೀಡದಿದ್ದರೆ ಈಗಲೇ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಹೇಳಿ ಹೊರಟು ಹೋಗಿದ್ಧಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಮಾಯಾವತಿ ಕೂಡಲೇ ಕ್ಷಮೆ ಕೇಳಬೇಕು. ಸವಾಲು ಹಾಕುವ ಮೂಲಕ ಕಲಾಪಕ್ಕೆ ಅಗೌರವ ತೋರಿದ್ದಾರೆಂದು ಆರೋಪಿಸಿದ್ಧಾರೆ.

ಮಾಯಾವತಿ ಎತ್ತಿದ ವಿಷಯ ಮೌಲ್ಯಯುತ ಮತ್ತು ಗಂಭೀರವಾದದ್ದು. ಲೆ ದೌರ್ಜನ್ಯ ನಡೆಯುತ್ತಿದ್ದರೂ ಈ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ದಲಿತರು ಮತ್ತು ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ: ಫಲಿಸುತ್ತಾ ರಾಜ್ಯ ಸರ್ಕಾರದ ಯತ್ನ