Select Your Language

Notifications

webdunia
webdunia
webdunia
webdunia

ಸಿದ್ದು ಆಯ್ತು ಈಗ ಚೌಹಾಣ್; ಅಂಗರಕ್ಷಕನ ಕೈಯಲ್ಲಿ ಸಿಎಂ ಶೂ

ಸಿದ್ದು ಆಯ್ತು ಈಗ ಚೌಹಾಣ್; ಅಂಗರಕ್ಷಕನ ಕೈಯಲ್ಲಿ ಸಿಎಂ ಶೂ
ಉಜ್ಜಯನಿ , ಶುಕ್ರವಾರ, 6 ಜನವರಿ 2017 (14:14 IST)
ಮೊನ್ನೆ ಮೊನ್ನೆ ಅಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಆಪ್ತರಿಂದ ಶೂ ಲೇಸ್ ಕಟ್ಟಿಕೊಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಮತ್ತೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರದಿ. 
 
ಗುರುವಾರ ಉಜ್ಜಯನಿಗೆ ತೆರಳಿದ್ದ ಚೌಹಾಣ್, ತಪೋಭೂಮಿಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಅವರು ಬರಿಗಾಲಲ್ಲಿ ಹೊರಬರುತ್ತಿದ್ದರೆ ಅವರ ಶೂಗಳು ಅಂಗರಕ್ಷಕನ ಕೈಯಲ್ಲಿದ್ದವು. ಈ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 
 
ಕಳೆದ ವರ್ಷ ಪನ್ನಾ ಜಿಲ್ಲೆಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಪರಿಶೀಲನೆಗೆ ಹೋಗಿದ್ದ ಚೌಹಾಣ್ ಅವರನ್ನು ನೀರಿದ್ದ ಸ್ಥಳದಲ್ಲಿ ಅಂಗರಕ್ಷಕರು ಎತ್ತಿಕೊಂಡು ಹೋಗಿದ್ದು ವಿವಾದಕ್ಕೆ ಗ್ರಾಸವಾಗಿತ್ತು. 
 
ಈಗ ಮತ್ತೆ ಅಂತಹದೇ ಕಾರಣಕ್ಕೆ ಚೌಹಾಣ್ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 
 
 
  

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ: ಮಹಿಳೆಯ ಎದೆಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು