Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಮಾತನಾಡಿದ್ದರಿಂದ ಭೂಕಂಪವಾಗಲ್ಲ: ಮೋದಿ ಲೇವಡಿ

ರಾಹುಲ್ ಗಾಂಧಿ ಮಾತನಾಡಿದ್ದರಿಂದ ಭೂಕಂಪವಾಗಲ್ಲ: ಮೋದಿ ಲೇವಡಿ
ವಾರಣಾಸಿ , ಗುರುವಾರ, 22 ಡಿಸೆಂಬರ್ 2016 (14:32 IST)
ದೇಶದ ಯುವ ನಾಯಕರೊಬ್ಬರು ಮಾತನಾಡಲು ಆರಂಭಿಸಿದ್ದರಿಂದ ಭೂಕಂಪವಾಗುವ ಸಾಧ್ಯತೆಗಳಿಲ್ಲ ಎಂದು ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ್ದಾರೆ.
 
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಹರಾ ಸಂಸ್ಥೆಯಿಂದ ಕೋಟಿ ಕೋಟಿ ಹಣ ಸ್ವೀಕರಿಸಿದ್ದರು ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ, ಪ್ರಧಾನಿ ಮೋದಿ ಗಂಗೆಯಷ್ಟೆ ಪವಿತ್ರರು ಎಂದು ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದೆ.
 
ಪ್ರಧಾನಮಂತ್ರಿ ಮೋದಿಯವರ ವ್ಯಯಕ್ತಿಕ ಭ್ರಷ್ಟಾಚಾರದ ಬಗ್ಗೆ ನನ್ನಲ್ಲಿ ಮಾಹಿತಿಯಿದೆ. ಆದರೆ, ಸಂಸತ್ತಿನಲ್ಲಿ ಮಾತನಾಡಲು ಸರಕಾರ ಅವಕಾಶ ಕೊಡುತ್ತಿಲ್ಲ. ಒಂದು ವೇಳೆ ಮಾತನಾಡಲು ಅವಕಾಶ ನೀಡಿದಲ್ಲಿ ಭೂಕಂಪವಾಗಲಿದೆ ಎಂದು ರಾಹುಲ್ ಹೇಳಿಕೆ ನೀಡಿದ್ದರು.
 
ದೇಶದ ಯುವನೇತಾ ಯಾವ ರೀತಿ ಭಾಷಣ ಮಾಡಬೇಕು ಎನ್ನುವುದನ್ನು ಕಲಿಯುತ್ತಿದ್ದಾರೆ. ಅವರು ಕಲಿಯುತ್ತಿರುವುದು ನನಗೆ ಸಂತೋಷ ತಂದಿದೆ. ಅವರು ಮಾತನಾಡಲು ಆರಂಭಿಸಿದ್ದರಿಂದ ಇದೀಗ ಭೂಕಂಪವಾಗುವ ಸಾಧ್ಯತೆಗಳಿಲ್ಲ ಎಂದು ಪ್ರಧಾನಿ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕದಿಂದ ಧಾರವಾಡದಲ್ಲಿರೋ ಪತ್ನಿಗೆ ತಲಾಖ್