Publish Date: Mon, 10 Sep 2018 (09:39 IST)
Updated Date: Mon, 10 Sep 2018 (09:41 IST)
ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ನೇತೃತ್ವದಲ್ಲಿ ಕರೆ ನೀಡಿರುವ ಭಾರತ್ ಬಂಧ್ ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.
ಇಂದು ಬಂದ್ ಆಚರಿಸುವ ಬದಲು ಹೆಚ್ಚುವರಿಯಾಗಿ ಒಂದು ಗಂಟೆ ಕೆಲಸ ಮಾಡುವುದಾಗಿ ಕೆಲವು ಮೋದಿ ಅಭಿಮಾನಿಗಳ ಅಂಗಡಿ, ಹೋಟೆಲ್ ಮತ್ತಿತರ ಮಳಿಗೆಗಳ ಮಾಲಿಕರು ತಮ್ಮ ಅಂಗಡಿ ಎದುರು ಫಲಕ ಹಾಕಿ ಭಾರತ್ ಬಂಧ್ ಗೆ ತಿರುಗೇಟು ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ಬೆಂಬಲಿಗರು ಇದಕ್ಕೆ ವ್ಯಾಪಕ ಪ್ರಚಾರ ಕೊಟ್ಟಿದ್ದು, ಆ ಮೂಲಕ ತಾವು ಬಂದ್ ಗೆ ಬೆಂಬಲ ಕೊಡಲ್ಲ ಎಂದು ಸಾಂಕೇತಿಕವಾಗಿ ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.