Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಉತ್ತಮ ಉದ್ದೇಶವುಳ್ಳ ಒಳ್ಳೆಯ ವ್ಯಕ್ತಿ: ಮುಲಾಯಂ ಸೊಸೆ

ಪ್ರಧಾನಿ ಮೋದಿ ಉತ್ತಮ ಉದ್ದೇಶವುಳ್ಳ ಒಳ್ಳೆಯ ವ್ಯಕ್ತಿ: ಮುಲಾಯಂ ಸೊಸೆ
ಲಕ್ನೋ , ಗುರುವಾರ, 26 ಜನವರಿ 2017 (14:17 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತಮ ಉದ್ದೇಶವುಳ್ಳ ಅತ್ಯುತ್ತಮ ವ್ಯಕ್ತಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್ ಗುಣಗಾನ ಮಾಡಿದ್ದಾರೆ.
 
ಪ್ರಧಾನಮಂತ್ರಿ ಮೋದಿ ಕೆಲ ಬೇಜವಾಬ್ದಾರಿ ಅಧಿಕಾರಿಗಳ ಸಲಹೆಗಳನ್ನು ಪಡೆದು ನೋಟ್ ಬ್ಯಾನ್ ಜಾರಿಗೊಳಿಸಿರುವುದು ದೇಶಕ್ಕೆ ವಿನಾಶಕಾರಿಯಾಗಿ ಪರಿಣಮಿಸಿತು ಎಂದು ತಿಳಿಸಿದ್ದಾರೆ.  
 
ಲಕ್ನೋ ಕಂಟೋನ್ಮೆಂಟ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ್ ಎದುರಾಳಿಯಾಗಿ ಸ್ಪರ್ಧಿಸಿರುವ ಅಪರ್ಣಾ ಯಾದವ್, ಕುಟುಂಬದ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಅವರ ಸಂಪೂರ್ಣ ಬೆಂಬಲ ಪಡೆದಿದ್ದಾರೆ ಎನ್ನಲಾಗಿದೆ. 
 
ಮುಲಾಯಂ ಸಿಂಗ್ ಯಾದವ್ ವಿರುದ್ಧ ಪುತ್ರ ಅಖಿಲೇಶ್ ಯಾದವ್ ರಣಕಹಳೆ ಮೊಳಗಿಸಿದ್ದರಿಂದ ಪಕ್ಷದಲ್ಲಿ ಕೆಲ ಕಾಲ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
 
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಕ್ಷದ ಅಂತರಿಕ ಭಿನ್ನಮತದಲ್ಲಿ ಜಯಗಳಿಸಿದ ನಂತರ ಇದೀಗ ವಿಧಾನಭೆ ಚುನಾವಣೆಯತ್ತ ಗಮನಹರಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ಅಸಮಾಧಾನ: ಸಚಿವೆ ಸ್ಮೃತಿ ಇರಾನಿ ಪ್ರತಿಕೃತಿ ದಹಿಸಿದ ಬಿಜೆಪಿ ಕಾರ್ಯಕರ್ತರು