14 ವರ್ಷದ ದಲಿತ ಬಾಲಕಿಯ ಮೇಲೆ ಇಬ್ಬರು ಆರೋಪಿಗಳು ಗ್ಯಾಂಗ್ರೇಪ್ ಎಸಗಿದ ಘಟನೆ ಅತ್ರೌಲಿ ಪಟ್ಟಣದಲ್ಲಿ ನಡೆದಿದೆ.
ನೆರೆಮನೆಯಲ್ಲಿದ್ದ ಮಹಿಳೆ, ಬಾಲಕಿಗೆ ಆಮಿಷ ತೋರಿಸಿ ಮನೆಯೊಳಗೆ ಕೂಡಿಹಾಕಿದ್ದಾಳೆ. ಬಾಲಕಿ ಮನೆಯನ್ನು ಪ್ರವೇಶಿಸುವುದಕ್ಕಿಂತ ಮುಂಚೆ ಇಬ್ಬರು ಆರೋಪಿಗಳಾದ ಶೈಲೇಶ್ ಸಿಂಗ್ ಮತ್ತು ಲೋಕೇಶ್ ಎನ್ನುವವರು ಮನೆಯೊಳಗೆ ಅಡಗಿಕೊಂಡಿದ್ದಾರೆ.
ಮನೆಯಿಂದ ಓಡಿಹೋಗಲು ಬಾಲಕಿ ಪ್ರಯತ್ನಿಸುತ್ತಿದ್ದಂತೆ ಇಬ್ಬರು ಆರೋಪಿಗಳು ಮಹಿಳೆಯ ಸಹಾಯದಿಂದ ಆಕೆಯನ್ನು ಕಟ್ಟಿಹಾಕಿ ಗ್ಯಾಂಗ್ರೇಪ್ ಎಸಗಿದ್ದಾರೆ. ತದನಂತರ ಬಾಲಕಿ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದ್ದರಿಂದ ಕೂಗು ಕೇಳಿದ ದಾರಿಹೋಕರು ಮನೆಯೊಳಗೆ ನುಗ್ಗಿ ಆರೋಪಿಗಳನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದಲಿತ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಸುದ್ದಿ ತಿಳಿದ ವಾಲ್ಮಿಕಿ ಸಮುದಾಯದ ಸದಸ್ಯರು ಅತ್ರೌಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಎಟಹಾ ಲೋಕಸಭಾ ಕ್ಷೇತ್ರದ ಸಂಸದ ರಾಜವೀರ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು ದಲಿತ ಬಾಲಕಿಯ ಮನೆಗೆ ಬಂದು ಪೋಷಕರನ್ನು ಸಂತೈಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ