Webdunia - Bharat's app for daily news and videos

Install App

Meghalaya Honeymoon Case: ನೂರಕ್ಕೆ ನೂರು ಇದು ಆಕೆಯೇ ಮಾಡಿದ್ದು: ಸೋನಮ್‌ ವಿರುದ್ಧ ಕೆಂಡಕಾರಿದ ಸಹೋದರ

Sampriya
ಬುಧವಾರ, 11 ಜೂನ್ 2025 (16:33 IST)
Photo Courtesy X
ಮೇಘಾಲಯ: ಇಲ್ಲಿಯವರೆಗೆ ಸಿಕ್ಕಿರುವ ಸಾಕ್ಷ್ಯಗಳ ಪ್ರಕಾರ,  ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಸಹೋದರಿ ಸೋನಮ್‌ ಕೈವಾಡವಿರುವುದು ನನಗೆ 100% ಖಚಿತವಾಗಿದೆ ಎಂದು ಆಕೆಯ ಸಹೋದರ ಗೋವಿಂದ್ ಆರೋಪಿಸಿದ್ದಾರೆ. 

ಇದುವರೆಗೆ ಸೋನಮ್ ಅವರ ಕುಟುಂಬ ರಾಜ ರಘುವಂಶಿ ಹತ್ಯೆ ಪ್ರಕರಣದಲ್ಲಿ ನಮ್ಮ ಮಗಳ ಪಾತ್ರವಿಲ್ಲ ಎಂದು ವಾದಿಸುತ್ತಲೇ ಬಂದಿದ್ದರು. ಈ ಅಪರಾಧದಲ್ಲಿ ಅವರ ಭಾಗಿಯಾಗಿರುವ ಸಾಧ್ಯತೆಯನ್ನು ನಿರಾಕರಿಸಿದ್ದರು.

ಮೇಘಾಲಯದ ಕಮರಿಯಲ್ಲಿ ಪತಿಯ ಶವ ಪತ್ತೆಯಾದ 14 ದಿನಗಳ ನಂತರ ಉತ್ತರ ಪ್ರದೇಶದಲ್ಲಿ ಶರಣಾದ ಸೋನಮ್ ರಘುವಂಶಿ ಪ್ರಸ್ತುತ ಟ್ರಾನ್ಸಿಟ್ ರಿಮಾಂಡ್‌ನಲ್ಲಿದ್ದಾರೆ. ಪತಿಯ ಕೊಲೆಗೆ ಸಂಚು ರೂಪಿಸಿದ ಮತ್ತು ಅದಕ್ಕಾಗಿ ಕೊಲೆಗಾರರನ್ನು ನೇಮಿಸಿಕೊಂಡ ಆರೋಪ ಆಕೆಯ ಮೇಲಿದೆ. ಸೋನಮ್ ಪ್ರಿಯಕರ ರಾಜ್ ಸೇರಿದಂತೆ ಐವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.

ಇದೀಗ ಸೋನಾಮ್ ಸಹೋದರ ಗೋವಿಂದ, ಹತ್ಯೆಯಾದ ರಾಜ ರಘುವಂಶಿಯ ತಾಯಿಯನ್ನು ಭೇಟಿಯಾಗಿ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾನೆ. ಈ ವೇಳೆ ತಾಜ ರಘುವಂಶಿಯ ಹತ್ಯೆ ಪ್ರಕರಣದಲ್ಲಿ ಸೋನಾಮ್ ಪಾತ್ರವಿರುವುದು ದೃಢವಾಗಿದೆ ಎಂದರು. 

ಇಲ್ಲಿಯವರೆಗೆ ಸಿಕ್ಕಿರುವ ಸಾಕ್ಷ್ಯಗಳ ಪ್ರಕಾರ, ಅವಳು ಈ ಕೊಲೆ ಮಾಡಿದ್ದಾಳೆ ಎಂದು ನನಗೆ 100% ಖಚಿತವಾಗಿದೆ. ಈ ಪ್ರಕರಣದ ಎಲ್ಲಾ ಆರೋಪಿಗಳು ರಾಜ್ ಕುಶ್ವಾಹ ಜೊತೆ ಸಂಬಂಧ ಹೊಂದಿದ್ದಾರೆ. ನಾವು ಸೋನಮ್ ರಘುವಂಶಿ ಜೊತೆಗಿನ ನಮ್ಮ ಸಂಬಂಧವನ್ನು ಮುರಿದುಕೊಂಡಿದ್ದೇವೆ. ನಾನು ರಾಜಾ ಅವರ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಗೋವಿಂದ್ ಹೇಳಿದರು.

ರಾಜ್ ಕುಶ್ವಾಹ ಜೊತೆಗಿನ ಸಂಬಂಧದ ಬಗ್ಗೆ ಸೋನಮ್ ತಮ್ಮ ತಾಯಿಗೆ ಎಂದಿಗೂ ತಿಳಿಸಿರಲಿಲ್ಲ ಎಂದು ಅವರು ಬಹಿರಂಗಪಡಿಸಿದರು. "ನಮಗೆ ತಿಳಿದಿದ್ದರೆ, ನಾವು ಇದು ಸಂಭವಿಸಲು ಎಂದಿಗೂ ಬಿಡುತ್ತಿರಲಿಲ್ಲ" ಎಂದು ಅವರು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kasargodu: ಬಾಲ್ಯದ ಘಟನೆಗೆ 50 ವರ್ಷಗಳ ಬಳಿಕ ಪ್ರತೀಕಾರ ತೀರಿಸಿಕೊಂಡ ವ್ಯಕ್ತಿ

ಸತ್ಯ ಹರಿಶ್ಚಂದ್ರರ ತುಂಡುಗಳ ಬಣ್ಣವೆಲ್ಲಾ ಬಯಲಾಗ್ತಿದೆ: ಬಿ ಶ್ರೀರಾಮುಲು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

ಮುಂದಿನ ಸುದ್ದಿ
Show comments