Select Your Language

Notifications

webdunia
webdunia
webdunia
webdunia

ಮಾಧ್ಯಮಗಳು ರಾಜನ್‌ರನ್ನು ದೇವದೂತನಂತೆ, ನನ್ನನ್ನು ಭೂತದಂತೆ ಬಿಂಬಿಸುತ್ತಿವೆ: ಸ್ವಾಮಿ

ಮಾಧ್ಯಮಗಳು
ನವದೆಹಲಿ , ಸೋಮವಾರ, 8 ಆಗಸ್ಟ್ 2016 (15:39 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧದ ಟೀಕೆಗಳನ್ನು ತಳ್ಳಿಹಾಕಿದ್ದರೂ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ರಾಜನ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. 
 
ಆರ್ಥಿಕ ಪರಿಷ್ಕರಣ ನೀತಿ ಕುರಿತಂತೆ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ, ಮಾಧ್ಯಮಗಳು ರಾಜನ್‌ರನ್ನು ದೇವದೂತರಂತೆ ನನ್ನನ್ನು ಭೂತದಂತೆ ಬಿಂಬಿಸುತ್ತಿವೆ ಎಂದು ಕಿಡಿಕಾರಿದ್ದಾರೆ. 
 
ವಿದೇಶಿ ಶಕ್ತಿಗಳಿಂದ ಪ್ರೇರಿತವಾದ ಮಾಧ್ಯಮಗಳು ರಾಜನ್ ಹುದ್ದೆಯಿಂದ ನಿರ್ಗಮಿಸಿದಲ್ಲಿ ಶೇರುಪೇಟೆ ಕುಸಿದುಹೋಗುತ್ತದೆ ಎನ್ನುವ ಅನುಮನ ವ್ಯಕ್ತಪಡಿಸುತ್ತಿವೆ. ಆದರೆ, ವಾಸ್ತವವಾಗಿ ರಾಜನ್ ನಿರ್ಗಮಿಸಿದಲ್ಲಿ ಶೇರುಪೇಟೆ ಚೇತರಿಕೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.
 
ಆರ್‌‍ಬಿಐ ಗವರ್ನರ್ ರಘುರಾಮ್ ರಾಜನ್ ಬಡ್ಡಿ ದರಗಳನ್ನು ಹೆಟ್ಟಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬ್ಯಾಂಕ್‌ನಿಂದ ಸಾಲ ಪಡೆಯುವುದನ್ನು ಅಸಾಧ್ಯವಾಗಿಸಿವೆ
 
ವಿರಾಟ್ ಹಿಂದೂಸ್ತಾನ್ ಸಂಗಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನವನ್ನು ಮರುನೆನೆಪಿಸಿಕೊಂಡರು.
 
ಕಳೆದ ಜೂನ್ 27 ರಂದು ಪ್ರಧಾನಮಂತ್ರಿ ಮೋದಿ, ಆರ್‌ಬಿಐ ಗವರ್ನರ್ ರಾಜನ್ ಮತ್ತು ಕೆಲ ಹಿರಿಯ ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳ ವಿರುದ್ಧ ಸ್ವಾಮಿ ಮಾಡಿದ ಆರೋಪಗಳನ್ನು ತಳ್ಳಿಹಾಕಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಸ್. ಈಶ್ವರಪ್ಪರಿಂದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬ್ರಿಗೇಡ್