Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಮಾಯಾವತಿ ವೇಶ್ಯೆಗಿಂತಲೂ ಕೀಳು: ಬಿಜೆಪಿ ಮುಖಂಡ

ಬಿಜೆಪಿ
ನವದೆಹಲಿ , ಬುಧವಾರ, 20 ಜುಲೈ 2016 (19:35 IST)
ಬಹಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿಧಾನಸಭಾ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದು ಹೆಚ್ಚಿನ ಮೊತ್ತ ನೀಡಿದವರಿಗೆ ಟಿಕೆಟ್ ನೀಡುತ್ತಿದ್ದಾರೆ. ಅವರು ವೇಶ್ಯೆಗಿಂತ ಕಡೆಯಾಗಿದ್ದಾರೆ ಎಂದು ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.
 
ಬಹುಜನ ಸಮಾಜದ ಸಂಸ್ಥಾಪಕ ಕಾನ್ಶಿರಾಮ್ ಅವರ ಸಿದ್ದಾಂತಗಳನ್ನು ಮೂಲೆಗೆ ತಳ್ಳಿುರುವ ಮಾಯಾವತಿ, ಟಿಕೆಟ್ ಹಣಕ್ಕಾಗಿ ಮಾರಾಟ ಮಾಡುವುದು ನೋಡಿದಲ್ಲಿ ಆಕೆ ವೇಶ್ಯೆಗಿಂತ ಕೀಳಾಗಿದ್ದಾಳೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಇಂದು ಬೆಳಿಗ್ಗೆ 1 ಕೋಟಿ ರೂಪಾಯಿಗೆ ಟಿಕೆಟ್ ಮಾರಾಟ ಮಾಡಿದರೆ, ಎರಡು ಗಂಟೆಗಳ ನಂತರ ಅದೇ ಟಿಕೆಟ್ 2 ಕೋಟಿಗೆ ಮಾರಾಟ ಮಾಡುತ್ತಾರೆ. ಮತ್ತದೇ ಟಿಕೆಟ್‌ನ್ನು 3 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ. 
 
ಮಾಜಿ ಮುಖ್ಯಮಂತ್ರಿ ಮಾಯಾವತಿಯವರನ್ನು ವೇಶ್ಯೆಗಿಂತ ಕೀಳು ಎಂದು ಹೇಳಿರುವ ಬಿಜೆಪಿ ಮುಖಂಡನ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
 
ಬಹಜನ ಸಮಾಜ ಪಕ್ಷದ ಬೆಳವಣಿಗೆಗಳನ್ನು ಸಹಿಸಿದ ಬಿಜೆಪಿ ಇಂತಹ ಅಸಭ್ಯ ಹೇಳಿಕೆಗಳನ್ನು ನೀಡುವಂತೆ ಪಕ್ಷದ ಮುಖಂಡರಿಗೆ ಪ್ರೊತ್ಸಾಹ ನೀಡುತ್ತಿದೆ ಎಂದು ಮಾಜಿ ಸಿಎಂ ಮಾಯಾವತಿ ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಮಾಯಾವತಿಯವರ ಕ್ಷಮೆ ಕೋರುವಂತೆ ಪಕ್ಷ ಆದೇಶಿಸಿದೆ. ಒಂದು ವೇಳೆ ಅವರು ಕ್ಷಮೆ ಕೋರದಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ್ ಮೌರ್ಯ ತಿಳಿಸಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿನ ಕುರಿತಾದ ಅನ್ವೇಷಣೆಗಳಾಗಲಿ ವಿಜ್ಞಾನಿಗಳಿಗೆ ಶ್ರೀಗಳ ಕರೆ