Select Your Language

Notifications

webdunia
webdunia
webdunia
webdunia

ಸಂಸದ ಭಗವಂತ್ ಮಾನ್ ವಿರುದ್ಧ ಕಠಿಣ ಕ್ರಮ: ಸುಮಿತ್ರಾ ಮಹಾಜನ್

ಸಂಸದ ಭಗವಂತ್ ಮಾನ್ ವಿರುದ್ಧ ಕಠಿಣ ಕ್ರಮ: ಸುಮಿತ್ರಾ ಮಹಾಜನ್
ನವದೆಹಲಿ , ಶುಕ್ರವಾರ, 22 ಜುಲೈ 2016 (14:58 IST)
ಸಂಸತ್ತಿನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋ ತೆಗೆದ ಆಪ್ ಪಕ್ಷದ ಸಂಸದ ಭಗವಂತ್ ಮಾನ್‌ಗೆ ಲೋಕಸಭೆಯ ಸಭಾಪತಿ ನೋಟಿಸ್ ಜಾರಿಗೊಳಿಸಿದ್ದಾರೆ. 
 
ಬಿಜೆಪಿ ಸಂಸದರಾದ ಮಹೇಶ್ ಗಿರಿ ಮತ್ತು ಕೀರ್ತಿ ಸೋಮಯ್ಯ ಸಂಸದ ಭಗವಂತ್ ಮಾನ್ ವಿರುದ್ಧ ಸಲ್ಲಿಸಿದ ಹಕ್ಕುಚ್ಯುತಿ ನೋಟಿಸ್‌ ಕೂಡಾ ಲೋಕಸಭೆಯ ಸಭಾಪತಿಗೆ ಸಲ್ಲಿಸಲಾಗಿದೆ.
 
ಸಂಸತ್ತಿನ ಭಧ್ರತೆಗೆ ಧಕ್ಕೆ ಬಂದಾಗ 13 ಭದ್ರತಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ. ವಿಷಯ ತುಂಬಾ ಗಂಬೀರವಾಗಿದ್ದು, ನಾನು ಪರಿಶೀಲನೆ ನಡೆಸುತ್ತೇನೆ ಎಂದು ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ತಿಳಿಸಿದ್ದಾರೆ.
 
ಸಂಸತ್ತಿನಲ್ಲಿ ಉಪಸ್ಥಿತರಿದ್ದ ಭಗವಂತ್ ಮಾನ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ಸಭಾಪತಿಯವರು ಕ್ಷಮೆಯಾಚನೆಗೆ ಆದೇಶಿಸಿದಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ವಾಯುಸೇನೆಯ ವಿಮಾನ ನಾಪತ್ತೆ: 29 ಪ್ರಯಾಣಿಕರ ಸಾವಿನ ಶಂಕೆ