Webdunia - Bharat's app for daily news and videos

Install App

ವಿವಾಹಿತ ಮಹಿಳೆಯನ್ನು ಒತ್ತೆಯಾಳಾಗಿರಿಸಿ 10 ದಿನ ರೇಪ್ ಎಸಗಿದ ಮಾಜಿ ಫ್ರೆಂಡ್

Webdunia
ಶನಿವಾರ, 30 ಸೆಪ್ಟಂಬರ್ 2017 (19:26 IST)
ಮಾಜಿ ಗೆಳೆಯನೊಬ್ಬ ವಿವಾಹಿತ ಮಹಿಳೆಯನ್ನು 10 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.
10 ದಿನಗಳ ನಂತರ ಬಂಧನದಿಂದ ತಪ್ಪಿಸಿಕೊಂಡ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಆಕೆಯ ತಂದೆ ಕೂಡಾ 10 ದಿನಗಳ ಹಿಂದೆ ಪುತ್ರಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾಗಿ ಮೂಲಗಳು ತಿಳಿಸಿವೆ.
 
 ಪೊಲೀಸ್ ಮೂಲಗಳ ಪ್ರಕಾರ, ಮದುವೆಯ ಮುಂಚೆ ಯುವತಿ ಮೌಂಟ್ ಅಬುವಿನಲ್ಲಿ ಮಾರ್ಬಲ್ ಉದ್ಯಮಿಯೊಂದಿಗೆ ಉದ್ಯೋಗದಲ್ಲಿದ್ದರು ಎನ್ನಲಾಗಿದೆ.
 
ಏತನ್ಮಧ್ಯೆ, ಯುವತಿಗೆ ಕಟ್ಟಡ ನಿರ್ಮಾಣದ ಕೆಲಸದಲ್ಲಿದ್ದ ಗುತ್ತಿಗೆದಾರನೊಬ್ಬನ ಪುತ್ರನ ಪರಿಚಯವಾಗಿದೆ. ಇಬ್ಬರು ಮೊಬೈಲ್ ಫೋನ್‌ನಲ್ಲಿ ಸಂಭಾಷಣೆ ಆರಂಭಿಸಿದ್ದಾರೆ. ಪುತ್ರಿಯ ವರ್ತನೆ ಪೋಷಕರಿಗೆ ಆತಂಕ ಮೂಡಿಸಿದೆ.
 
ಕೆಲ ದಿನಗಳ ನಂತರ ಯುವತಿಯನ್ನು ಅಹ್ಮದಾಬಾದ್‌ನಲ್ಲಿರುವ ಯುವಕನೊಂದಿಗೆ ವಿವಾಹವಾಗಿದೆ. ಅತ್ತೆ ಮಾವನ ಮನೆಯಲ್ಲಿದ್ದ ಮಹಿಳೆಗೆ ಆರೋಪಿ ಘನಶ್ಯಾಮ್ ಕಿರುಕುಳ ನೀಡಲು ಆರಂಭಿಸಿದ್ದಾನೆ.
 
ಘನಶ್ಯಾಮ್‌ನಿಂದ ಕಿರುಕುಳ ತಪ್ಪಿಸಿಕೊಳ್ಳಲು ಮಹಿಳೆ ಸಿಮ್ ಕಾರ್ಡ್ ಮುರಿದುಹಾಕಿದ್ದಾಳೆ. ಮೊಬೈಲ್‌ ಫೋನ್‌ನಲ್ಲಿ ಸಂಪರ್ಕಿಸದಾದಾಗ ಘನಶ್ಯಾಮ್ ಆಕೆಯ ಅತ್ತೆಗೆ ಫೋನ್ ಮಾಡಲು ಆರಂಭಿಸಿದ್ದಾನೆ. ಪತಿಯ ಫೋನ್ ನಂಬರ್ ನನ್ನ ಹತ್ತಿರ ಇದೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
 
ಒಂದು ವೇಳೆ ಭೇಟಿ ಮಾಡಲು ಬಾರದಿದ್ದಲ್ಲಿ ರಾಸಲೀಲೆಯ ವಿಡಿಯೋಗಳನ್ನು ಪತಿಗೆ ಕಳುಹಿಸಿಕೊಡುವುದಾಗಿ ಬೆದರಿಕೆ ಹಾಕಿದ್ದಾನೆ, ಒಂದು ವೇಳೆ ಬಂದಲ್ಲಿ ವಿಡಿಯೋಗಳನ್ನು ಅಳಿಸಿಹಾಕುವ ಭರವಸೆ ನೀಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 
 
ಆರೋಪಿಯ ಮಾತನ್ನು ನಂಬಿದ ಮಹಿಳೆ ಮೌಂಟಬುಕ್ಕೆ ಆಗಮಿಸಿದ್ದಾಳೆ. ಅವಳಿಗಾಗಿ ಕಾಯುತ್ತಾ ನಿಂತಿದ್ದ ಘನಶ್ಯಾಮ್, ಆಕೆಯನ್ನು ವಿಶ್ರಾಂತಿಯ ನೆಪದಲ್ಲಿ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ. ಹೋಟೆಲ್ ಊಟದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ನಂತರ 10 ದಿನಗಳವರೆಗೆ ಅತ್ಯಾಚಾರವೆಸಗಿದ್ದ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.
 
ಕೊನೆಗೊಂದು ದಿನ ತಪ್ಪಿಸಿಕೊಳ್ಳುವ ಅವಕಾಶ ದೊರೆತಿದ್ದರಿಂದ ಅಲ್ಲಿಂದ ಪಾರಾಗಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾಗಿ ಮಹಿಳೆ ತಿಳಿಸಿದ್ದಾಳೆ.
 
ಆರೋಪಿ ಘನಶ್ಯಾಮ್ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments