Webdunia - Bharat's app for daily news and videos

Install App

55 ವಧುಗಳ ಜತೆ ಮಲಗಿದ್ದ ಜಮಾಯಿ ರಾಜಾ ನಿಧನ

Webdunia
ಮಂಗಳವಾರ, 14 ಜೂನ್ 2016 (14:04 IST)
18 ಕ್ಕೂ ಹೆಚ್ಚು ಲೈಂಗಿಕ ಹಿಂಸೆ ಪ್ರಕರಣಗಳನ್ನೆದುರಿಸುತ್ತಿದ್ದ, 'ಜಮಾಯಿ ರಾಜಾ' ಎಂದೇ ಕುಖ್ಯಾತನಾಗಿದ್ದ 'ಜೈರಾಮ್ ಜಾಟ್' ಕೊನೆಗೂ ಅವಿವಾಹಿತನಾಗಿಯೇ ಸಾವನ್ನಪ್ಪಿದ್ದಾನೆ. ಪಶ್ಚಿಮ ರಾಜಸ್ಥಾನದ ಬರ್ಮಾರ್ ಜಿಲ್ಲೆಯ ಸಿಂಧಾರಿ ಬಳಿಯ ನಿಂಬಲ್ಕೋಟ್ ಗ್ರಾಮದಲ್ಲಿ ಶನಿವಾರ ಆತ ಕೊನೆಯುಸಿರೆಳೆದಿದ್ದು ಪೊಲೀಸರೇ ಆತನ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ಈತ ಸುಮಾರು 55 ಯುವತಿಯರನ್ನು ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.
 
54 ವರ್ಷದ ಜೈರಾಮ್ 1994ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧಿಸಲ್ಪಟ್ಟಿದ್ದ. ಬಿಡುಗಡೆಯಾದ ಬಳಿಕ ಅಂದರೆ 1994ರಿಂದ ಇಲ್ಲಿಯವರೆಗೆ ಆತನ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ. ತಾನು 55 ನವವಧುಗಳನ್ನು ವಂಚಿಸಿ ಲೈಂಗಿಕ ಸಂಪರ್ಕ ಮಾಡಿದ್ದೇನೆ ಎಂದಾತ 9 ವರ್ಷಗಳ ಬಳಿಕ ಬಾಯ್ಬಿಟ್ಟಿದ್ದ ಎಂದು ಸಿಂಧಾರಿ ಪೊಲೀಸ್ ಠಾಣಾಧಿಕಾರಿ ರಾಮ್ ನಿವಾಸ್ ಬಿಷ್ನೋಯಿ ತಿಳಿಸಿದ್ದಾರೆ. 
 
ಹೊಲಗದ್ದೆಗಳ (ರೈತರ ಒಂಟಿಮನೆ) ಮಧ್ಯೆ ಇರುತ್ತಿದ್ದ ಮನೆಗಳನ್ನು ಗುರಿಯಾಗಿಸಿಕೊಂಡು ಈತ ಕಾರ್ಯತಂತ್ರ ರೂಪಿಸುತ್ತಿದ್ದ. ಪಶ್ಚಿಮ ರಾಜಸ್ಥಾನದಲ್ಲಿ ಬಾಲ್ಯವಿವಾಹ ಸಾಮಾನ್ಯವಾಗಿದ್ದು ಹುಡುಗಿಯರು ಪ್ರೌಢರಾಗುತ್ತಿದ್ದಂತೆ ಪತಿಯ ಮನೆಗೆ ಕಳುಹಿಸುವ ಗೌನಾ ಪದ್ಧತಿ ಅಲ್ಲಿ ಚಾಲ್ತಿಯಲ್ಲಿದೆ. ಅಂತಹ ಮನೆಗಳನ್ನು ಹುಡುಕುತ್ತಿದ್ದ ಆತ ಹುಡುಗಿಯರಷ್ಟೇ ಇರುತ್ತಿದ್ದ ಮನೆಗಳಿಗೆ ಸಂಜೆಯ ಸಮಯದಲ್ಲಿ  ಭೇಟಿ ನೀಡುತ್ತಿದ್ದ ಮತ್ತು ನಾನು ನಿನ್ನ ಪತಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಾಲ್ಯದಲ್ಲಿ ಮದುವೆಯಾಗಿದ್ದರಿಂದ ಅವರಿಗೆ ಪತಿಯ ಮುಖ ಪರಿಚಯ ಇರುತ್ತಿರಲಿಲ್ಲ. ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಆತ ಬಳಿಕ ಅವರ ಮೈಮೇಲಿದ್ದ ಚಿನ್ನವನ್ನು ಕದ್ದು ಪರಾರಿಯಾಗುತ್ತಿದ್ದ .
 
2013ರಲ್ಲಿ ಆತ 56ನೇ ವಧುವಿನ ಮೇಲೆ ದಾಳಿ ನಡೆಸಿದಾಗ ಆತ ಸಿಕ್ಕಿ ಬಿದ್ದಿದ್ದ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ