Select Your Language

Notifications

webdunia
webdunia
webdunia
webdunia

ತಾಯಿ, ಪತ್ನಿ, ಪುತ್ರಿಯರನ್ನು ಕೊಚ್ಚಿ ಕೊಂದು ಪೊಲೀಸ್ ಠಾಣೆಗೆ ಬಂದ

Man
ಮುಂಬೈ , ಸೋಮವಾರ, 12 ಸೆಪ್ಟಂಬರ್ 2016 (11:53 IST)
ವ್ಯಕ್ತಿಯೋರ್ವ ತನ್ನ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಕೊಚ್ಚಿ ಕೊಂದ ಕರಾಳ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್ ತಾಲೂಕಿನ ಕಡ್ನೂರ್ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಘಟನೆ ಸುಮಾರು 500 ಮನೆಗಳಿರುವ ಪುಟ್ಟ ಹಳ್ಳಿಯನ್ನು ಬೆಚ್ಚಿ ಬೀಳಿಸಿದೆ. 

 
ಆರೋಪಿಯನ್ನು 45 ವರ್ಷದ ಭರತ್ ಇರ್ಕಾರ್ ಎಂದು ಗುರುತಿಸಲಾಗಿದ್ದು, ಆತ ತನ್ನ ತಾಯಿ ಸುಶೀಲಾ, ಪತ್ನಿ ಸಿಂಧೂಬಾಯಿ ಮತ್ತು ಮಕ್ಕಳಾದ ರೂಪಾಲಿ ಮತ್ತು ರಾಣಿಯನ್ನು ಕತ್ತರಿಸಿ ಹಾಕಿದ್ದಾನೆ.
 
ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ವೃತ್ತಿಯಲ್ಲಿ ರೈತನಾಗಿರುವ ಭರತ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯವನ್ನೆಸಗಿರಬಹುದೆಂದು ಶಂಕಿಸಲಾಗಿದೆ.
 
ಶನಿವಾರ ಮುಂಜಾನೆ ಭರತ್ ಪತ್ನಿ ಜತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಜಗಳ ಆರಂಭವಾಗಿದೆ. ಕೋಪದ ಭರದಲ್ಲಾತ ಹರಿತವಾದ ಆಯುಧದಿಂದ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ತನ್ನ ತಾಯಿ ಮತ್ತು ಮಕ್ಕಳನ್ನು ಅಲ್ಲಿಗೆ ಕರೆ ತಂದ ಆತ ಮನಬಂದಂತೆ ಕತ್ತರಿಸಿ ಹಾಕಿದ್ದಾನೆ. ಬಳಿಕ ಜಾಟ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆತನ ಬಾಯಿಂದ ಬೀಭತ್ಸ ಕಥೆ ಕೇಳಿ ಪೊಲೀಸರು ಸಹ ಬೆಚ್ಚಿ ಬಿದ್ದಿದ್ದಾರೆ.
 
ಭರತ್ ಹಿರಿಯ ಮಗಳು ರೂಪಾಲಿ ವಾಣಿಜ್ಯ ವಿಷಯದಲ್ಲಿ ಪದವಿ, ಕಿರಿಯವಳು 11 ನೇ ತರಗತಿಯನ್ನು ಓದುತ್ತಿದ್ದಳು. ಆತನಿಗೆ ಮತ್ತಿಬ್ಬರು ಗಂಡು ಮಕ್ಕಳಿದ್ದು ಗಣೇಶ ವಿಸರ್ಜನೆ ಉತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ರಾತ್ರಿ ಅವರು ಹೊರಗೆ ಹೋಗಿದ್ದರು. ಘಟನೆ ನಡೆದಾಗ ಅವರು ಮನೆಯಲ್ಲಿರಲಿಲ್ಲವೆಂದು ತಿಳಿದು ಬಂದಿದೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ನಿಜವಾದ ಕಾರಣವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ಕನ್ನಡಿಗರ ಮೇಲೆ ದರ್ಪ ತೋರಿದ ತಮಿಳಿಗರು