Webdunia - Bharat's app for daily news and videos

Install App

ಕುಂಭಮೇಳ ಮುಗಿದ ಮೇಲೆ ಗಂಗಾನದಿ ತಟದಲ್ಲಿ ಚಿನ್ನ, ಹಣಕ್ಕಾಗಿ ಹುಡುಕಾಡುತ್ತಿರುವ ಯುವಕನ ವಿಡಿಯೋ ವೈರಲ್

Krishnaveni K
ಸೋಮವಾರ, 10 ಮಾರ್ಚ್ 2025 (11:42 IST)
ಪ್ರಯಾಗ್ ರಾಜ್: ಕುಂಭಮೇಳ ಮುಗಿದ ಮೇಲೆ ಗಂಗಾ ನದಿ ತಟದಲ್ಲಿ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಚಿನ್ನ, ಬೆಳ್ಳಿ, ನಾಣ್ಯಗಳಿಗಾಗಿ ಹುಡುಕಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜನವರಿಯಲ್ಲಿ ಆರಂಭವಾದ ಮಹಾಕುಂಭಮೇಳ ಫೆಬ್ರವರಿ 26 ಶಿವರಾತ್ರಿಯಂದು ಸಮಾಪ್ತಿಯಾಯಿತು. ಕುಂಭಮೇಳಕ್ಕೆ 45 ಕೋಟಿಗೂ ಅಧಿಕ ಮಂದಿ ಭೇಟಿ ನೀಡಿ ಪುಣ್ಯಸ್ನಾನ ಮಾಡಿ ಹೋಗಿದ್ದಾರೆ.

ಕುಂಭಮೇಳದಲ್ಲಿ ಒಂದು ಬಾರಿ ಕಾಲ್ತುಳಿತದ ಅನಾಹುತವೂ ಆಗಿದೆ. ಇದೀಗ ಕುಂಭಮೇಳ ಮುಗಿದ ಬಳಿಕ ಪ್ರಯಾಗ್ ರಾಜ್ ಬಿಕೋ ಎನ್ನುತ್ತಿದೆ. ಕೆಲವೇ ಜನ ಭೇಟಿ ಕೊಡುವುದು ಬಿಟ್ಟರೆ ಪ್ರಯಾಗ್ ರಾಜ್ ನಲ್ಲಿ ಮೊದಲಿನ ಜನ ಜಂಗುಳಿಯಿಲ್ಲ.

ಇದೀಗ ಯುವಕನೊಬ್ಬ ಮೆಟಲ್ ಡಿಟೆಕ್ಟರ್ ಹಿಡಿದುಕೊಂಡು ಗಂಗಾನದಿ ತಟದ ಮರಳಿನಲ್ಲಿ ಜನ ಕಳೆದುಕೊಂಡ ವಸ್ತುಗಳನ್ನು ಹುಡುಕಾಡುತ್ತಿದ್ದಾನೆ. ಆಗಲೇ ಆತನಿಗೆ ಒಂದು ಚೈನು, ಸ್ವಲ್ಪ ನಾಣ್ಯಗಳು ಸಿಕ್ಕಿವೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments