Webdunia - Bharat's app for daily news and videos

Install App

ಹಾವು ಕಚ್ಚಿ ಸತ್ತವನು ಅಂತ್ಯಕ್ರಿಯೆ ಮಾಡುವಾಗ ಎದ್ದು ಕುಳಿತ

Webdunia
ಸೋಮವಾರ, 1 ಆಗಸ್ಟ್ 2016 (12:12 IST)
ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದುಕೊಂಡಿದ್ದ ಯುವಕನೊಬ್ಬ ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎನ್ನುವಾಗ ಎದ್ದು ಕುಳಿತ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮತ್ತೆ ಆತ ಸಾವನ್ನಪ್ಪಿದ್ದಾನೆ.


ಸತ್ತು ಬದುಕಿ ಮತ್ತೆ ಸತ್ತವನನ್ನು 23 ವರ್ಷದ ಸಂದೀಪ್ ಎಂದು ಗುರುತಿಸಲಾಗಿದ್ದು ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸುತ್ತಿರುವಾಗ ಆತನಿಗೆ ಹಾವು ಕಚ್ಚಿತ್ತು. ತಕ್ಷಣ ಮನೆಗೆ ಹಿಂತಿರುಗಿದ ಆತ ತನಗೆ ಹಾವು ಕಚ್ಚಿರುವುದನ್ನು ತಿಳಿಸಿದ. ಆತನನ್ನು ಆಸ್ಪತ್ರೆಗೆ ಸಾಗಿಸುವ ಬದಲು ಕುಟುಂಬದವರು ಮಂತ್ರವಾದಿಯ ಬಳಿ ಕರೆದೊಯ್ದರು. ಆತನ ಚಿಕಿತ್ಸೆಗೆ ಸಂದೀಪ್ ಸ್ಪಂದಿಸಲಿಲ್ಲ. ಕೊನೆಗೆ ಆತ ಸಾವನ್ನಪ್ಪಿದ್ದಾನೆ ಎಂದು ತಾಂತ್ರಿಕ ಘೋಷಿಸಿದ.

ಹಾವು ಕಚ್ಚಿ ಸತ್ತವರನ್ನು ಸುಡಬಾರದು, ಮಣ್ಣು ಮಾಡಬೇಕು ಎಂಬ ಧಾರ್ಮಿಕ ನಂಬಿಕೆಯಂತೆ ಆತನನ್ನು ಮಣ್ಣು ಮಾಡಲು ನಿರ್ಧರಿಸಲಾಯಿತು.

ಆದರೆ ವಾಸ್ತವವಾಗಿ ಆತ ಸತ್ತಿರಲಿಲ್ಲ. ಪ್ರಜ್ಞೆ ಕಳೆದುಕೊಂಡಿದ್ದ. ಇನ್ನೇನು ಮಣ್ಣು ಮಾಡಬೇಕು ಎನ್ನುವಾಗ ಆತ ಕಿರುಚತೊಡಗಿದ್ದಾನೆ. ಆತ ಬದುಕಿದ್ದಾನೆ ಎಂದು ತಿಳಿದ ಕೂಡಲೇ ಮತ್ತೆ ಅದೇ ತಾಂತ್ರಿಕನ ಬಳಿ ಕರೆದೊಯ್ಯಲಾಗಿದೆ. ಆದರೆ ಈ ಬಾರಿ ಆತ ನಿಜವಾಗಿಯೂ ಸತ್ತಿದ್ದಾನೆ.

ಗ್ರಾಮಸ್ಥರು ದೇಹವನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಆತ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದರು.  ಗ್ರಾಮಸ್ಥರ ಕುರುಡು ನಂಬಿಕೆಯಿಂದ ಸಂದೀಪ್ ಪ್ರಾಣ ಕಳೆದುಕೊಳ್ಳುವಂತಾಯಿತು.
  ಹಾವು ಕಚ್ಚಿ ಸತ್ತವನು ಅಂತ್ಯಕ್ರಿಯೆ ಮಾಡುವಾಗ ಎದ್ದು ಕುಳಿತ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

30 ವರ್ಷಗಳಲ್ಲೇ ಇದು ಭೀಕರ ದಾಳಿ: ಪಹಲ್ಗಾಮ್‌ನಲ್ಲಿ ದಾಳಿಯಲ್ಲಿ 27ಕ್ಕೂ ಹೆಚ್ಚು ಪ್ರವಾಸಿಗರು ಸಾವು ಶಂಕೆ

Pehalgam terror attack: ಪ್ಯಾಂಟ್ ಹಿಡಿದೆಳೆದು ಹಿಂದೂ ಎಂದು ಕನ್ ಫರ್ಮ್ ಮಾಡಿ ಕೊಂದೇ ಬಿಟ್ಟ ಉಗ್ರರು

Pehalgam Terror Attack: ಸ್ಥಳಕ್ಕೆ ಅಮಿತ್ ಶಾ ಎಂಟ್ರಿ, ಉಗ್ರರನ್ನು ಸುಮ್ನೇ ಬಿಡಲ್ಲ ಎಂದ ಮೋದಿ

ಉಗ್ರರ ಪೈಶಾಚಿಕ ದಾಳಿಯಲ್ಲಿ ಸಿಲುಕಿದ ಶಿವಮೊಗ್ಗದ ಕುಟುಂಬ: ಕಾಶ್ಮೀರಕ್ಕೆ ರಾಜ್ಯದ ಅಧಿಕಾರಿಗಳ ದೌಡು

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕ ಉದ್ಯಮಿ ಬಲಿ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ

ಮುಂದಿನ ಸುದ್ದಿ
Show comments