ರೌಡಿ ಶೀಟರ್ ಕಿರುಕುಳದಿಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಅಕ್ಟೋಬರ್ 15ರಂದು ಆನೇಕಲ್ ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದ್ದು ಬಹಳ ತಂಡವಾಗಿ ಬೆಳಕಿಗೆ ಬಂದಿದ್ದು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ಕೇಳಿ ಬಂದಿದೆ.
ಮೃತ ರಂಜಿತ್ ಕುಮಾರ್ (27) ಯುವತಿಯೊಬ್ಬಳನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆ ಮಾಡಲು ಮೊದಲು ಒಪ್ಪಿದ್ದ ಯುವತಿಯ ಸಂಬಂಧಿಕರು ಬಳಿಕ ನಿರಾಕರಿಸಿದ್ದರು. ಈ ಯುವತಿಯ ತಾಯಿಯ ಸಹೋದರ , ರೌಡಿಶೀಟರ್, ಸಂಸದ ಡಿ.ಕೆ. ಸುರೇಶ್ ಸಹಚರ ಎನ್ನಲಾಗುತ್ತಿರುವ ಸಂಭಯ್ಯ ರಂಜಿತ್ಗೆ ಯುವತಿಯನ್ನು ಮರೆತುಬಿಡುವಂತೆ ವಿಪರೀತ ಕಿರುಕುಳ ನೀಡಿದ್ದಾನೆ. ಇದರಿಂದ ನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ ಡೆತ್ ನೋಟ್ ಕೂಡ ಬರೆದಿಟ್ಟಿದ್ದು ಈ ಕುರಿತು ತನಿಖೆ ಪ್ರಾರಂಭಿಸಿದ ಅತ್ತಿಬೆಲೆ ಪಿಎಸ್ ಐಗೆ ಆನೇಕಲ್ ಶಾಸಕ ಶಿವಣ್ಣ 'ಅವರು ನಮ್ಮ ಹುಡುಗರು, ಬಿಟ್ಟುಬಿಡಿ', ಎಂದು ಒತ್ತಡ ಹೇರಿದ್ದು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಪಿಎಸ್ಐ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು, ಶಿವಣ್ಣ ಮತ್ತು ಪಿಎಸ್ಐ ನಡುವೆ ನಡೆದ ಫೋನ್ ಸಂಭಾಷಣೆಯನ್ನು ಖಾಸಗಿ ಸುದ್ದಿವಾಹಿನಿ ಪ್ರಸಾರ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ