Select Your Language

Notifications

webdunia
webdunia
webdunia
webdunia

ಗೆಳೆಯನ ಪುತ್ರಿಯ ಸಾವಿಗೆ ಕಾರಣವಾದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಗೆಳೆಯನ ಪುತ್ರಿಯ ಸಾವಿಗೆ ಕಾರಣವಾದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಚೆನ್ನೈ , ಸೋಮವಾರ, 10 ಫೆಬ್ರವರಿ 2020 (09:37 IST)
ಚೆನ್ನೈ: ಗೆಳೆಯನ ಪುತ್ರಿಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಆಕ್ಸಿಡೆಂಟ್ ಆಗಿ ಆಕೆಯ ಸಾವಿಗೆ ಕಾರಣನಾದೆ ಎಂಬ ಬೇಸರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ನಾಗಪಟ್ಟನಂ ಬಳಿಕ ಸಂಭವಿಸಿದೆ.

 
45 ವರ್ಷದ ವೀರಮಣಿ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನ ಸ್ನೇಹಿತನ ಮನವಿ ಮೇರೆಗೆ ಆತನ 16 ವರ್ಷದ ಪುತ್ರಿಯನ್ನು ಶಾಲೆಗೆ ಕರೆದೊಯ್ಯುವಾಗ ದ್ವಿಚಕ್ರ ವಾಹನ ಬಸ್ ಗೆ ಡಿಕ್ಕಿಯಾಗಿ ಆಕೆ ಮೃತಪಟ್ಟಿದ್ದಳು.  ವೀರಮಣಿಗೂ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ.

ಡಿಸ್ಚಾರ್ಜ್‍ ಆಗಿ ಮನೆಗೆ ಮರಳಿ ಬಂದ ಮೇಲೆ ಅದೇ ಮಾನಸಿಕ ವೇದನೆಯಲ್ಲಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಮೃತನಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದ ಸುಪ್ರೀಂ ತೀರ್ಪನ್ನು ಖಂಡಿಸಿದ ಮಲ್ಲಿಕಾರ್ಜುನ ಖರ್ಗೆ