Select Your Language

Notifications

webdunia
webdunia
webdunia
webdunia

ಈಗ್ಲೇ ಬೇಡ, ಈ ಸಮಯದವರೆಗಾದರೂ ಮಲ್ಲಿಕಾರ್ಜುನ ಖರ್ಗೆ ಬದುಕಿರಬೇಕು: ಅಮಿತ್ ಶಾ ಟಾಂಗ್

Amit Shah

Krishnaveni K

ನವದೆಹಲಿ , ಸೋಮವಾರ, 30 ಸೆಪ್ಟಂಬರ್ 2024 (13:31 IST)
ನವದೆಹಲಿ: ನಿನ್ನೆ ಜಮ್ಮು ಕಾಶ್ಮೀರ ಚುನಾವಣಾ ರಾಲಿಯಲ್ಲಿ ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಸಾಯಲ್ಲ ಎಂದು ಎಂದಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಮಿತ್ ಶಾ ಟಾಂಗ್ ನೀಡಿದ್ದಾರೆ.

ಅಮಿತ್ ಶಾ ಇಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಖರ್ಗೆ ಜೀ ನೀವು ಈಗಲೇ ಅಲ್ಲ, ಮುಂದೆ ಮೋದಿ ಜಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವುದನ್ನು ನೋಡುವವರೆಗೂ ಬದುಕಿರಬೇಕು ಎಂದು ಅಮಿತ್ ಶಾ ಎಂದು ಟಾಂಗ್ ಕೊಟ್ಟಿದ್ದಾರೆ.

ಟ್ವಿಟರ್ ನಲ್ಲಿ ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮ್ಮ ವೈಯಕ್ತಿಕ ಆರೋಗ್ಯ ವಿಚಾರಕ್ಕೂ ಮೋದಿಜೀಯವರನ್ನು ಎಳೆದು ತರುವ ಖರ್ಗೆಜೀ ಮನಸ್ಥಿತಿ ಮತ್ತು ಅವರ ಧ್ವೇಷ ಮನೋಭಾವವನ್ನು ಇದು ತೋರಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದರು.

ಖರ್ಗೇ ಜೀ ನಿಮಗೆ ದೀರ್ಘಾಯಸ್ಸು ನೀಡಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ. 2047 ರ ವೇಳೆಗೆ ಭಾರತ ವಿಕಸಿತ ದೇಶ ಆಗುವುದನ್ನು ನೋಡುವವರೆಗೂ ಮತ್ತು ಬಹಳ ವರ್ಷಗಳ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಹಗರಣ ಬಿಸಿ: ಇಂದಿನ ಕಾರ್ಯಕ್ರಮಗಳನ್ನೆಲ್ಲಾ ರದ್ದು ಮಾಡಿ ಕೂತ ಸಿಎಂ ಸಿದ್ದರಾಮಯ್ಯ