Select Your Language

Notifications

webdunia
webdunia
webdunia
webdunia

14 ಸುತ್ತು ಗುಂಡು ಹಾರಿಸಿ ಕಾಂಗ್ರೆಸ್ ನಾಯಕನ ಕಗ್ಗೊಲೆ

14 ಸುತ್ತು ಗುಂಡು ಹಾರಿಸಿ ಕಾಂಗ್ರೆಸ್ ನಾಯಕನ ಕಗ್ಗೊಲೆ
ಜಬಲ್ಪುರ್ , ಗುರುವಾರ, 5 ಜನವರಿ 2017 (12:05 IST)
ಕಾಂಗ್ರೆಸ್ ಮುಖಂಡ ಸೇರಿದಂತೆ ಇಬ್ಬರನ್ನು ಗುಂಡಿಕ್ಕಿ ಕೊಲೆಗೈದ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. 
ಬುಧವಾರ ರಾತ್ರಿ 10ಗಂಟೆ ಸುಮಾರಿಗೆ ಅಪರಿಚಿತ ಬಂದೂಕುಧಾರಿ ವ್ಯಕ್ತಿಯೊಬ್ಬ ಫುಡ್ ಸ್ಟಾಲ್ ಒಂದರ ಮುಂದೆ ನಿಂತಿದ್ದ ಕಾಂಗ್ರೆಸ್ ನಾಯಕ ರಾಜು ಮಿಶ್ರಾ ಮತ್ತು ಕುಕ್ಕು ಸರ್ದಾರ್ ಎಂಬುವವರ ಹಿಂದಿನಿಂದ ಬಂದು 14 ಸುತ್ತು ಗುಂಡಿನ ಮಳೆಗರೆದಿದ್ದಾನೆ. 
 
ಘಟನಾ ಸ್ಥಳದಿಂದ ಪೊಲೀಸರು ಬುಲೆಟ್ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. 
 
ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ವಿದಿವಿಜ್ಞಾನ ತನಿಖೆಯನ್ನು ಪ್ರಾರಂಭಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ಸುಪ್ರೀಂಕೋರ್ಟ್ ಆದೇಶ ಪಾಲಿಸದಿರಲು ರಾಜ್ಯ ಸರಕಾರ ನಿರ್ಧಾರ