Webdunia - Bharat's app for daily news and videos

Install App

ಬೇರೆ ಜಾತಿಯವನೊಂದಿಗೆ ಪ್ರೀತಿ: ಪುತ್ರಿಯನ್ನೇ ಹತ್ಯೆಗೈದ ಪೋಷಕರು

Webdunia
ಸೋಮವಾರ, 20 ನವೆಂಬರ್ 2023 (07:50 IST)
ಯುವತಿ ತನ್ನ ತಂದೆ, ತಾಯಿಯನ್ನು ಧಿಕ್ಕರಿಸಿ ಜಗಸೀರ್ ಎಂಬ ಯುವಕನಲ್ಲಿ ಅನುರಕ್ತನಾಗಿದ್ದಳು. ಜಗಸೀರ್ ಬೇರೆ ಜಾತಿಗೆ ಸೇರಿದ್ದು, ಕುಟುಂಬ ಈ ಪ್ರೇಮವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಯುವತಿಯ ಗೆಳೆಯ ಅವಳ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಎಚ್ಚೆತ್ತ ಪೊಲೀಸರು ಚಿತಾಗಾರಕ್ಕೆ ಧಾವಿಸಿ, ಉರಿಯುತ್ತಿದ್ದ ಚಿತೆಯನ್ನು ಆರಿಸಿದರು. ಯುವತಿಯ ಹತ್ಯೆಕೋರರ ಪತ್ತೆಗೆ ಸಾಕ್ಷ್ಯಗಳ ಸುಳಿವಿಗಾಗಿ ಅವರು ಚಿತೆಯನ್ನು ಆರಿಸಿದ್ದರು.
 
 ಗ್ರಾಮವೊಂದರಲ್ಲಿ ಯುವತಿಯೊಬ್ಬಳನ್ನು ಅವಳ ಕುಟುಂಬದವರೇ ಹತ್ಯೆ ಮಾಡಿ ಆತುರಾತುರವಾಗಿ ಅಂತ್ಯಕ್ರಿಯೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಇದೊಂದು ಮರ್ಯಾದೆ ಹತ್ಯೆಯ ನಿದರ್ಶನವೆಂದು ಹೇಳಲಾಗುತ್ತಿದೆ. ಯುವತಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದರಿಂದ ತಮ್ಮ ಕುಟುಂಬದ ಮರ್ಯಾದೆ ಬೀದಿಪಾಲಾಗಿದೆಯೆಂದು ಮನೆಯ ಮಗಳನ್ನೇ ಸಾವಿನ ಕೂಪಕ್ಕೆ ತಳ್ಳಿದ್ದಾರೆಂದು ಯುವತಿಯ ಗೆಳೆಯ ಪೊಲೀಸರಿಗೆ ದೂರು ನೀಡಿದ್ದಾನೆ.
 
ಆದರೆ ಯುವತಿ ಜಗಸೀರ್‌ನನ್ನೇ ವರಿಸುವುದಾಗಿ ಪಟ್ಟುಹಿಡಿದಿದ್ದರಿಂದ ಆಕ್ರೋಶಗೊಂಡ ಕುಟುಂಬ ಯುವತಿಯನ್ನು ಹತ್ಯೆ ಮಾಡಿರುವುದಾಗಿ ಜಗಸೀರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ಯುವತಿ ಹರ್ಜೀಂದರ್ ಕೌರ್ ದೇಹವನ್ನು ಸೂರ್ಯಾಸ್ತದ ನಂತರ ಚಿತಾಗಾರದಲ್ಲಿ ಸುಡಲಾಗಿತ್ತು. ಆದರೆ ಇದು ಸಂಪ್ರದಾಯಕ್ಕೆ ವಿರುದ್ಧವಾಗಿದ್ದರಿಂದ ಜಗಸೀರ್‌ ಅವಳ ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಕುಟುಂಬದವರ ವಿರುದ್ಧ ಮರ್ಯಾದೆ ಹತ್ಯೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೀತೆಯಿಂದ ದೂರವಾದ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ಹೇಳಿಕೆಗೆ ಬಿಜೆಪಿ ಆಕ್ರೋಶ

ಧರ್ಮಸ್ಥಳ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರುವುದು ನಿಜಾನಾ: ಇಲ್ಲಿದೆ ರಿಯಾಲಿಟಿ

ಭಾರತದ ಮೇಲೆ ಯುದ್ಧ ಮಾಡಿ ಸಿಂಧೂ ನದಿ ವಾಪಸ್ ಪಡೆಯಲು ಪಾಕಿಸ್ತಾನಕ್ಕೆ ಗೊತ್ತು: ಬಿಲಾವಲ್ ಭುಟ್ಟೊ

ಸಚಿವ ಸ್ಥಾನದಿಂದ ರಾಜಣ್ಣಗೆ ಗೇಟ್‌ಪಾಸ್‌: ಮಧುಗಿರಿ ಬಂದ್‌, ಅಭಿಮಾನಿಯಿಂದ ವಿಷ ಕುಡಿಯಲು ಯತ್ನ

ಕೇಳಿದ್ರೆ ರಾಜೀನಾಮೆ ಕೊಡ್ತಿದ್ದೆ, ವಜಾ ಮಾಡ್ಬೇಕಿತ್ತಾ: ಸಿಎಂ ಬಳಿ ನೋವು ತೋಡಿಕೊಂಡ ರಾಜಣ್ಣ

ಮುಂದಿನ ಸುದ್ದಿ
Show comments