Select Your Language

Notifications

webdunia
webdunia
webdunia
webdunia

ಆಕೆ ದೊಡ್ಡವರ ಟಾರ್ಗೆಟ್ ಆಗಿದ್ದಳು, ಯಾಕೆಂದರೆ..: ಕೋಲ್ಕತ್ತಾ ಟ್ರೈನಿ ವೈದ್ಯೆಯ ಬಗ್ಗೆ ಹೊರಬಿತ್ತು ಭಯಾನಕ ಸತ್ಯ

Kolkata doctor case

Krishnaveni K

ಕೋಲ್ಕತ್ತಾ , ಸೋಮವಾರ, 19 ಆಗಸ್ಟ್ 2024 (14:31 IST)
ಕೋಲ್ಕತ್ತಾ: ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ರೇಪ್ ಆಂಡ್ ಮರ್ಡರ್ ಆದ ಟ್ರೈನಿ ವೈದ್ಯೆ ಬಗ್ಗೆ ಆಕೆಯ ಸಹೋದ್ಯೋಗಿಗಳು ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದು, ಇದು ಈ ಪ್ರಕರಣದ ಹಿಂದೆ ದೊಡ್ಡವರ ಕೈವಾಡವಿರುವ ಬಗ್ಗೆ ಮತ್ತಷ್ಟು ಸಂಶಯ ಹುಟ್ಟುಹಾಕಿದೆ.

31 ವರ್ಷದ ವೈದ್ಯೆಯ ಮೃತದೇಹ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪತ್ತೆಯಾಗಿತ್ತು. ಆಕೆಯ ಖಾಸಗಿ ಅಂಗಾಂಗಳಿಂದ ರಕ್ತ ಸೋರುತ್ತಿತ್ತು. ಈ ರೇಪ್ ಆಂಡ್ ಮರ್ಡರ್ ಕೇಸ್ ಈಗ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಈಗ ಸಂಜಯ್ ರಾಯ್ ಎಂಬ ಆರೋಪಿಯನ್ನು ಬಂಧಿಸಿ ಸಿಬಿಐ ತಂಡ ತನಿಖೆ ನಡೆಸುತ್ತಿದೆ.

ಆದರೆ ಸಂಜಯ್ ರಾಯ್ ಹಿಂದೆ ಬೇರೆಯವರ ಕೈವಾಡವಿದೆ ಎನ್ನುವುದು ಸಹೋದ್ಯೋಗಿಗಳ ಆರೋಪವಾಗಿದೆ. ಯಾಕೆಂದರೆ ಸಂತ್ರಸ್ತೆ ಆ ಸಮಯದಲ್ಲಿ ಸೆಮಿನಾರ್ ಹಾಲ್ ನಲ್ಲೇ ಇದ್ದಳು ಎಂಬ ವಿಚಾರ ಆರೋಪಿಗೆ ಹೇಗೆ ಗೊತ್ತಾಯ್ತು. ಆಸ್ಪತ್ರೆಯ ಹೊರಗೆ ಕರ್ತವ್ಯ ಮಾಡುವವನಿಗೆ ಆಸ್ಪತ್ರೆಯ ಒಳಗೆ ಆಕೆ ಒಬ್ಬಳೇ ಇದ್ದ ವಿಚಾರ ಯಾರೋ ತಿಳಿಸಿರಬೇಕು ಎಂಬುದು ಸಹೋದ್ಯೋಗಿಗಳ ಅನುಮಾನ.

ಇನ್ನು, ಆಕೆಯನ್ನು ಸತತ 36 ಗಂಟೆಗಳ ಕಾಲ ಕರ್ತವ್ಯದಲ್ಲಿರುವಂತೆ ಮಾಡಿದ್ದು ಯಾಕೆ? ಈ ರೀತಿ ವಿಶ್ರಾಂತಿಯಿಲ್ಲದೇ ದುಡಿಸಿಕೊಂಡಿರುವುದರ ಹಿಂದೆ ಬೇರೆ ಏನೋ ಕಾರಣವಿರಲೇಬೇಕು ಎಂಬುದು ಅವರ ವಾದ. ಆಕೆಯನ್ನು ಯಾರೋ ದೊಡ್ಡ ಕೈಗಳು ಬೇಕೆಂದೇ ಟಾರ್ಗೆಟ್ ಮಾಡಿವೆ ಎನ್ನುವುದು ಸಹೋದ್ಯೋಗಿಗಳ ಆರೋಪ. ಯಾಕೆಂದರೆ ಆಕೆಗೆ ಡಿಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಯಾವುದೋ ಅವ್ಯವಹಾರದ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ಅರಿವಿತ್ತು. ಅದೇ ಕಾರಣಕ್ಕೆ ಯಾವುದೋ ದೊಡ್ಡ ಕೈಯೇ ಆಕೆಯ ವಿರುದ್ಧ ಸಂಚು ರೂಪಿಸಿದೆ ಎಂಬುದು ಸಹೋದ್ಯೋಗಿಗಳ ಆರೋಪ.

ಇನ್ನು ಸಂತ್ರಸ್ತೆಯ ಪೋಷಕರೂ ಇತ್ತೀಚೆಗೆ ತಮ್ಮ ಮಗಳಿಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗುವುದೇ ಇಷ್ಟವಿರಲಿಲ್ಲ ಎಂದಿದ್ದಾರೆ. ಆಕೆ ಆಸ್ಪತ್ರೆಗೆ ಹೋಗುವುದೆಂದರೇ ಬೇಸರ ವ್ಯಕ್ತಪಡಿಸುತ್ತಿದ್ದಳು. ಸಾವಿನ ಕೆಲವು ದಿನ ಮೊದಲು ನನಗೆ ಆರ್ ಜಿ ಕರ್ ಆಸ್ಪತ್ರೆಗೆ ಹೋಗಬೇಕೆಂದೇ ಅನಿಸುವುದಿಲ್ಲ ಎನ್ನುತ್ತಿದ್ದಳು ಎಂದು ಆಕೆಯ ಪೋಷಕರೂ ಹೇಳಿದ್ದಾರೆ. ಹೀಗಾಗಿ ವೈದ್ಯೆ ರೇಪ್ ಆಂಡ್ ಮರ್ಡರ್  ನ ಹಿಂದೆ ಸಾಕಷ್ಟು ಅನುಮಾನಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೊಂಬೆಯಾಟದ ಜೊತೆಗೆ ರಾಜಧಾನಿ ಜನತೆಗೆ ಥರಹೇವಾರಿ ರಾಜಸ್ಥಾನಿ ಆಹಾರ ಸವಿಯುವ ಯೋಗ: ವಿವರಗಳಿಗೆ ಇಲ್ಲಿ ನೋಡಿ