Select Your Language

Notifications

webdunia
webdunia
webdunia
webdunia

ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಬಂಗಾರದ ಗಿಫ್ಟ್ ಕೊಡಲಿರುವ ಕೆಸಿಆರ್.

ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಬಂಗಾರದ ಗಿಫ್ಟ್ ಕೊಡಲಿರುವ ಕೆಸಿಆರ್.
hyderabadh , ಮಂಗಳವಾರ, 21 ಫೆಬ್ರವರಿ 2017 (15:00 IST)
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ತಮ್ಮ ರಾಧ್ಯ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಬಂಗಾರದ ಗಿಫ್ಟ್ ಉಡುಗೊರೆಯಾಗಿ ನೀಡಲು ಸಿದ್ಧರಾಗಿದ್ದಾರೆ. ಸುಮಾರು 5.6 ಕೋಟಿ ರೂ. ಮೌಲ್ಯದ ಬಂಗಾರದ ಕೊಡುಗೆ ಇದಾಗಿದೆ.


ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಡವೆಗಳು, ಪದ್ವಾವತಿಗೆ ಬಂಗಾರದ ಮೂಗುತಿ ಮತ್ತು ವಾರಾಂತ್ಯಕ್ಕೆ ಕುರವಿ ವೀರಭದ್ರೇಶ್ವರನಿಗೆ ಬಂಗಾರದ ಮೀಸೆ ನೀಡಲು ಕೆಸಿಆರ್ ಮುಂದಾಗಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭ ದೇವರ ಬಳಿ ಹರಕೆ ಮಾಡಿಕೊಮಡಿದ್ದ ಕೆಸಿಆರ್ ಇದೀಗ ತನ್ನ ಆಶಯ ಈಡೇರಿರುವುದರಿಂದ ಹರಕೆ ತೀರಿಸುತ್ತಿದ್ದಾರೆ. 5 ಗಂಟೆಗೆ ತಿರುಪತಿಗೆ ಆಗಮಿಸಲಿರುವ ಕೆಸಿಆರ್ ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಳ್ಲಲಿದ್ದಾರೆ.

ಇದಕ್ಕೂ ಮುನ್ನ ಕೆಸಿಆರ್ ಹರಕೆಯ ಮೊದಲ ಭಾಗವಾಗಿ ವಾರಂಗಲ್`ನ ಭದ್ರಕಾಳಿಗೆ 12 ಕೆ.ಜಿ ತೂಕದ ಬಂಗಾರದ ಕಿರೀಟ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಏಟಿಗೆ ಪೊಲೀಸಪ್ಪ ಸುಸ್ತೋ ಸುಸ್ತು (ವೈರಲ್ ವಿಡಿಯೋ)