Select Your Language

Notifications

webdunia
webdunia
webdunia
webdunia

ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್: ಅಮಿತ್ ಶಾ ಘೋಷಣೆ

ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್: ಅಮಿತ್ ಶಾ ಘೋಷಣೆ
ಭುವನೇಶ್ವರ್ , ಶನಿವಾರ, 15 ಏಪ್ರಿಲ್ 2017 (20:43 IST)
ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್. ನಮ್ಮ ಎಲ್ಲ ರಾಜಕೀಯ ಲೆಕ್ಕಾಚಾರಗಳು ಸರಿಯಾಗಿಯೇ ಇವೆ. ಕರ್ನಾಟಕದಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೊಷಿಸಿದ್ದಾರೆ.
ಒಡಿಶಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅಮಿತ್ ಶಾ ನಮ್ಮ ಮುಂದಿನ ಟಾರ್ಗೆಟ್ ಗುಜರಾತ್, ಹಿಮಾಚಲಪ್ರದೇಶ ಮತ್ತು ಕರ್ನಾಟಕ ಎಂದು ಹೇಳಿದ್ದಾರೆ.


ಮುಂದಿನ ವರ್ಷ ಈ ಮೂರೂ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶವನ್ನ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಅಮಿತ್ ಶಾ ಈ ಮೂರೂ ರಾಜ್ಯಗಳತ್ತ ಚಿತ್ತ ನೆಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ಎನ್ನಲಾಗುವ ಕರ್ನಾಟಕವನ್ನೂ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ನಾಟಕದಲ್ಲಿ ಕೇಸರಿ ಬಾವುಟ ಬಾರಿಸಿದರೆ ಇತರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ನೆಲೆಯೂರಲು ಅನುಕೂಲವಾಗಲಿದೆ.

ಆದರೆ, ಉತ್ತರ ಭಾರತದಲ್ಲಿ ಹರಡಿರುವ ಮೋದಿ ಅಲೆ ದಕ್ಷಿಣದಲ್ಲಿ ಅಷ್ಟಾಗಿ ವರ್ಕೌಟ್ ಆಗಿಲ್ಲವಾದ್ದರಿಂದ ಬಿಜೆಪಿಗೆ ಇದೊಂದು ಸವಾಲಿನ ಕೆಲಸವಾಗಲಿದೆ. ಮೊನ್ನೆಯಷ್ಟೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು, ಬಿಜೆಪಿಯ ಹುಮ್ಮಸ್ಸಿಗೆ ಕೊಂಚ ತಣ್ಣೀರೆರಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರಿಗಾಗಿ ಬೈಕ್ ಖದಿಯುತ್ತಿದ್ದ ಖದೀಮರು ಅಂದರ್