ನವದೆಹಲಿ: ಕಾವೇರಿ ನೀರು ಹರಿಸಲು ಒತ್ತಡ ಹೇರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡಿಗೆ ಕಾನೂನು ಮಾರ್ಗದಲ್ಲೇ ತಿರುಗೇಟು ನೀಡಲು ಕರ್ನಾಟಕ ಪ್ರಯತ್ನ ಆರಂಭಿಸಿದೆ. ಬಾಕಿ ನೀರು ಹರಿಸುವಂತೆ ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಅನುಮತಿ ನೀಡುವಂತೆ ಕರ್ನಾಟಕ ಸಹ ಅರ್ಜಿ ಸಲ್ಲಿಸಿದೆ.