Select Your Language

Notifications

webdunia
webdunia
webdunia
webdunia

ರಾಮೇಶ್ವರಂನಲ್ಲಿ ಕನ್ನಡಿಗನ ಮೇಲೆ ದೌರ್ಜನ್ಯ (ವಿಡಿಯೋ)

karnataka driver
ರಾಮೇಶ್ವರಂ , ಸೋಮವಾರ, 12 ಸೆಪ್ಟಂಬರ್ 2016 (18:15 IST)
ಕಾವೇರಿ ಕಿಚ್ಚಿಗೆ ಕರ್ನಾಟಕ ಹೊತ್ತಿ ಉರಿಯುತ್ತಿದ್ದರೆ ತಮಿಳುನಾಡಿನಲ್ಲಿ ಕೂಡ ಕನ್ನಡಿಗರ ಮೇಲೆ ದಾಳಿ ನಡೆದ ಘಟನೆಗಳು ಕೆಲವೆಡೆ ವರದಿಯಾಗಿವೆ. ರಾಮೇಶ್ವರಂನಲ್ಲಿ ಕನ್ನಡಿಗನೊಬ್ಬನನ್ನು ಮನೆಯೊಳಗಿಂದ ಹೊರಗೆ ಎಳೆದು ಥಳಿಸಲಾಗಿದೆ. 

ಕನ್ನಡಿಗನಿಗೆ, ಕಾವೇರಿ ತಮಿಳರಿಗೆ ಸೇರಿದ್ದು ಎಂದು ಹೇಳು. ಇಲ್ಲದಿದ್ದರೆ ನಿನ್ನನ್ನು ಥಳಿಸುತ್ತೇವೆ, ಕೊಲ್ಲುತ್ತೇವೆ ಎಂದು ಧಮ್ಕಿ ಹಾಕಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಎಷ್ಟೇ ಹೊಡೆತ ತಿಂದರೂ ಕೂಡ ಆತ ಅವರ ಮಾತಿಗೆ ಒಪ್ಪದೇ ಎದೆಗಾರಿಕೆಯನ್ನು ಮೆರೆದಿದ್ದಾನೆ. ನನಗೆ ತಮಿಳು ಬರುವುದಿಲ್ಲ ಎಂದಷ್ಟೇ ಆತ ಹೇಳುತ್ತಿದ್ದಾನೆ
 
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
 
  ರಾಮೇಶ್ವರಂನಲ್ಲಿ ಕನ್ನಡಿಗನ ಮೇಲೆ ದೌರ್ಜನ್ಯ (ವಿಡಿಯೋ)
 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಹೋರಾಟ: ಆರತಕ್ಷತೆ ರದ್ದು ಮಾಡಿದ ಜಂಭದ ಹುಡುಗಿ