Webdunia - Bharat's app for daily news and videos

Install App

ಆನೆಯೂ ಪ್ಯಾಂಟ್ ಹಾಕತ್ತೆ ಗೊತ್ತಾ?

Webdunia
ಭಾನುವಾರ, 5 ಫೆಬ್ರವರಿ 2017 (13:36 IST)
ಬೆಕ್ಕು, ನಾಯಿ, ಮಂಗಗಳಿಗೆ ಚಡ್ಡಿ ಅಂಗಿ ಹಾಕುವುದನ್ನು ನೋಟಿರುತ್ತೀರ. ಆದರೆ ದೈತ್ಯ ಜೀವಿ ಆನೆ ಬಟ್ಟೆ ತೊಟ್ಟಿಕೊಂಡಿರುವುದನ್ನು ಎಂದಾದರೂ ನೋಡಿರುತ್ತೀರಾ?
ಸರ್ಕಸ್‌ಗಳಲ್ಲಿ ನೀವಿದನ್ನು ಕಂಡಿರಲಿಕ್ಕೆ ಸಾಕು. ಆದರೆ ಮಥುರಾದಲ್ಲಿರುವ ವನ್ಯಜೀವಿ ಸಂರಕ್ಷಣಾಲಯದಲ್ಲಿ ಆನೆಗಳಿಗೂ ಪ್ಯಾಟ್, ಜಾಕೆಟ್ ತೊಡಿಸಲಾಗುತ್ತಿದೆ. ಆದರೆ ಇದು ಮೋಜಿಗಲ್ಲ. ಉತ್ತರ ಭಾರತವನ್ನು ಆವರಿಸಿರುವ ಭೀಕರ ಚಳಿಯ ಪರಿಣಾಮ ಇದು.
 
ಹೌದು ಸಹಿಸಲಾಗದ ಚಳಿಯಿಂದ ರಕ್ಷಿಸಲು ಇಲ್ಲಿ ಆನೆಗಳಿಗೆ ಪ್ಯಾಂಟ್, ಜಾಕೆಟ್ ,ರಾತ್ರಿ ಉಡುಪುಗಳನ್ನು ತೊಡಿಸಲಾಗುತ್ತಿದೆ. ಜತೆಗೆ ಹೊದಿಕೆಗಳನ್ನು ಹೊದಿಸಲಾಗುತ್ತಿದೆ. 
 
ಇವೆಲ್ಲವು ರಕ್ಷಿತ ಆನೆಗಳಾಗಿದ್ದು ಸಾಕಷ್ಟು ದೌರ್ಜನ್ಯ, ಹಿಂಸೆಗಳನ್ನು ಎದುರಿಸಿರುವ ಇವುಗಳು ದೈಹಿಕವಾಗಿ ನಿಶಕ್ತವಾಗಿದ್ದು, ಎದೆ ನಡುಗಿಸುವ ಚಳಿಯಿಂದ ರಕ್ಷಣೆ ತುರ್ತು ಅಗತ್ಯವಾಗಿದೆ ಎನ್ನುತ್ತಾರೆ ಈ ವನ್ಯಜೀವಿ ಸಂರಕ್ಷಣಾಲಯದ ಸಹ ಸಂಸ್ಥಾಪಕ ಮತ್ತು ಸಿಇಓ ಕಾರ್ತಿಕ್ ಸತ್ಯನಾರಾಯಣ.
 
ಕೆಲವು ಸ್ವಯಂ ಸೇವಾಸಂಸ್ಥೆಗಳ ಮುಂದಾಳತ್ವದಲ್ಲಿ  ಸಂರಕ್ಷಣಾಲಯದ ಸಮೀಪವಿರುವ ಹಳ್ಳಿಯೊಂದರ ಕೆಲ ಮಹಿಳೆಯರು ಈ ಬಟ್ಟೆಗಳನ್ನು ಹೊಲಿದುಕೊಟ್ಟಿದ್ದಾರೆ.
 
ಪೌಷ್ಟಿಕ ಆಹಾರ, ನಿಯಮಿತ ಸ್ನಾನ, ಚಿಕಿತ್ಸೆ ನೀಡುವ ಮೂಲಕ ಈ ಆನೆಗಳನ್ನು ಆರೋಗ್ಯಕಾರಿ ಮತ್ತು ಸಂತೋಷದಿಂದ ಬದುಕಲು ಅನುವು ಮಾಡಿಕೊಡುವುದು ನಮ್ಮ ಗುರಿ ಎನ್ನುತ್ತಾರೆ ಸತ್ಯನಾರಾಯಣ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

B Dayanand Suspend: ಸಿಎಂಗೆ ಸಾಲು ಸಾಲು ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ

UP Encounter: 3 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪಿ ಯುಪಿ ಪೊಲೀಸರಿಂದ ಎನ್ ಕೌಂಟರ್

Bengaluru Stampede: ಡಿಸಿಎಂ ವಿರುದ್ದವೇ ಆರೋಪಿಸಿ, ಪತಿಯ ಬಂಧನ ಪ್ರಶ್ನಿಸಿದ ನಿಖಿಲ್ ಸೋಸಲೆ ಪತ್ನಿ

ದುರ್ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಿದ್ದಾರೆ: ವಿಜಯೇಂದ್ರ

Chenab bridge inauguration, ಬ್ರಿಟಿಷರು ಮಾಡಲು ಸಾಧ್ಯವಾಗದ್ದನ್ನು, ಮೋದಿ ಮಾಡಿ ತೋರಿಸಿದ್ದಾರೆ: ಸಿಎಂ ಒಮರ್‌ ಅಬ್ದುಲ್ಲಾ

ಮುಂದಿನ ಸುದ್ದಿ
Show comments