Webdunia - Bharat's app for daily news and videos

Install App

ಶಶಿಕಲಾ ಸಿಎಂ ಆದರೆ ಮಿಲಿಟರಿ ಆಡಳಿತ ನಿಶ್ಚಿತ: ಜಯಾ ಸೊಸೆ

Webdunia
ಭಾನುವಾರ, 5 ಫೆಬ್ರವರಿ 2017 (12:43 IST)
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದಾರೆ ಎಂಬ ವರದಿ ಹರಿದಾಡುತ್ತಿದು. ಈ ಬೆಳವಣಿಗೆ ಶಶಿಕಲಾ ಅವರ ರಾಜಕೀಯ ಶತ್ರು ಎಂದು ಈಗಾಗಲೇ ಬಿಂಬಿಸಿಕೊಂಡಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರಿಗೆ ಬೇಸರವನ್ನುಂಟು ಮಾಡಿದಂತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ಶಶಿಕಲಾ ಸಿಎಂ ಆದರೆ ಮಿಲಿಟರಿ ಆಡಳಿತ ನಿಶ್ಚಿತ ಎಂದಿದ್ದಾರೆ. 
ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿರುವ ದೀಪಾ, ತಮಿಳುನಾಡು ರಾಜಕೀಯದಲ್ಲಾಗುತ್ತಿರುವ ಈ ಬೆಳವಣಿಗೆಗೆ ನಾನು ವಿರುದ್ಧವಾಗಿದ್ದೇನೆ. ರಾಜ್ಯದ ಜನರು ಕೂಡ ಇದನ್ನು ಸ್ವೀಕರಿಸಲಾರರು. ಶಶಿಕಲಾ ಆಡಳಿತದ ಚುಕ್ಕಾಣಿ ಹಿಡಿದರೆಂದರೆ ಅದು ಪ್ರಜಾಪ್ರಭುತ್ವದ ಪತನವಾಗಿ ಮಿಲಿಟರಿ ಆಡಳಿತವಾಗುವುದಂತೂ ನಿಶ್ಚಿತ ಎಂದಿದ್ದಾರೆ. 
 
ಇಂದು ಎಐಡಿಎಂಕೆ ಪಕ್ಷದ ನಿರ್ಣಾಯಕ ಸಭೆ ನಡೆಯಲಿದ್ದು, ಪನ್ನೀರ್ ಸೆಲ್ವಂ ಅವರ ಸ್ಥಾನಕ್ಕೆ ಶಶಿಕಲಾ ಅವರನ್ನೇರಿಸುವ ಸಾಧ್ಯತೆಗಳು ದಟ್ಟವಾಗಿವೆ. ಜಯಲಲಿತಾ ನಿಧನದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ್ದ ಶಶಿಕಲಾ ಮುಖ್ಯಮಂತ್ರಿ ಸ್ಥಾನಕ್ಕೇರುವುದು ನಿರೀಕ್ಷಿತ ಬೆಳವಣಿಗೆ.
 
ಜಯಾ ನಿಧನದ ಬಳಿಕ ಎಐಡಿಎಂಕೆ ಕಾರ್ಯಕರ್ತರು ಮತ್ತು ಕೆಲ ನಾಯಕರು ಪಕ್ಷ ಸೇರುವಂತೆ ದೀಪಾ ಅವರನ್ನು ಒತ್ತಾಯಿಸಿದ್ದರು. ಅದರಂತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ, ಎಂಜಿಆರ್ ಶತಮಾನೋತ್ವದ ದಿನ ರಾಜಕೀಯ ರಂಗಪ್ರವೇಶ ಮಾಡಿದ್ದ, 42ರ ಹರೆಯದ ದೀಪಾ ಜಯಕುಮಾರ್,  ಜಯಾ ಆಪ್ತೆ, ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ತೊಡೆ ತಟ್ಟಿದ್ದರು.
 
ಜಯಾ ಸ್ಥಾನವನ್ನು ನಾನು ತುಂಬಬೇಕೆಂಬುದು ಬೆಂಬಲಿಗರ ಅಪೇಕ್ಷೆ. ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.ಬೇರೆಯವರು ಜಯಾ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ನಾನು ಕೂಡ ಇಷ್ಟ ಪಡಲ್ಲ ಎಂದು ಗುಡುಗಿದ್ದರು. 
 
ನನ್ನೆದುರು ಎರಡು ಆಯ್ಕೆಗಳಿವೆ. ನನ್ನ ಅತ್ತೆ ಕನಸುಗಳನ್ನು ಸಾಕಾರಗೊಳಿಸಲು ನಾನು ರಾಜಕೀಯಕ್ಕೆ ಸೇರುತ್ತೇನೆ. ಒಂದೋ ಎಐಡಿಎಂಕೆ ಸೇರುತ್ತೇನೆ, ಇಲ್ಲ ನನ್ನದೇ ಆದ ಹೊಸ ಪಕ್ಷ ಕಟ್ಟುತ್ತೇನೆ. ಜಯಲಲಿತಾ ಜನ್ಮದಿನದಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳುವುದರ ಮೂಲಕ ಕುತೂಹಲವನ್ನು ಕಾಯ್ದಿಟ್ಟಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Bakrid: ಬಕ್ರೀದ್ ಹಬ್ಬದ ಹಿನ್ನಲೆ, ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ಬದಲು: ಬದಲಿ ಮಾರ್ಗ ಇಲ್ಲಿದೆ

B Dayananda: ಸಿಎಂ ಹೇಳಿದ ತಕ್ಷಣ ಬಿ ದಯಾನಂದ ಸಸ್ಪೆಂಡ್ ಆಗಲ್ಲ, ಅಂತಿಮ ತೀರ್ಮಾನ ಇವರದ್ದೇ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಹವಾಮಾನ ಬದಲಾವಣೆ ಗಮನಿಸಿ

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

ಮುಂದಿನ ಸುದ್ದಿ
Show comments