Webdunia - Bharat's app for daily news and videos

Install App

ರಾಜ್ಯಸಭಾ ಸದಸ್ಯರಾಗಿ ಜೆಪಿ ನಡ್ಡಾ ಪ್ರಮಾಣ ವಚನ ಸ್ವೀಕಾರ

Sampriya
ಶನಿವಾರ, 6 ಏಪ್ರಿಲ್ 2024 (18:40 IST)
Photo Courtesy X
ನವದೆಹಲಿ: ಭಾರತೀಯ ಜನತಾ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು  ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಸಂಸತ್ ಭವನದಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಚುನಾಯಿತ ಸದಸ್ಯರಾಗಿರುವ ನಡ್ಡಾ ಅವರಿಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಪ್ರಮಾಣ ವಚನ ಬೋಧಿಸಿದರು.

ಈ ಬಗ್ಗೆ ರಾಷ್ಟ್ರಪತಿ ಎಕ್ಸ್‌ ಖಾತೆಯಲ್ಲಿ ಬರೆದು ಪೋಟೋಗಳನ್ನು ಪೋಸ್ಟ್‌ ಮಾಡಲಾಗಿದೆ.   "ಉಪರಾಷ್ಟ್ರಪತಿ  ಜಗದೀಪ್ ಧಂಖರ್ ಅವರು ಇಂದು ಸಂಸತ್ ಭವನದಲ್ಲಿ ಚುನಾಯಿತ ರಾಜ್ಯಸಭಾ ಸದಸ್ಯರಾಗಿ ಜಗತ್ ಪ್ರಕಾಶ್ ನಾರಾಯಣ ಲಾಲ್ ನಡ್ಡಾ ಅವರಿಗೆ ಪ್ರಮಾಣ ವಚನ ಬೋಧಿಸಿದರು" ಎಂದು ಬರೆಯಲಾಗಿದೆ.

ನಡ್ಡಾ ಅವರನ್ನು ಹೊರತುಪಡಿಸಿ, ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ ಇತರ ಐವರು ಸದಸ್ಯರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಪ್ರಮಾಣವಚನ ಸ್ವೀಕರಿಸಿದ ಚುನಾಯಿತ ಸದಸ್ಯರಲ್ಲಿ ಮಹಾರಾಷ್ಟ್ರದಿಂದ ಅಶೋಕರಾವ್ ಶಂಕರರಾವ್ ಚವಾಣ್, ರಾಜಸ್ಥಾನದಿಂದ ಚುನ್ನಿಲಾಲ್ ಗರಾಸಿಯಾ, ತೆಲಂಗಾಣದಿಂದ ಅನಿಲ್ ಕುಮಾರ್ ಯಾದವ್ ಮಂದಾಡಿ ಮತ್ತು ಪಶ್ಚಿಮ ಬಂಗಾಳದಿಂದ ಸುಶ್ಮಿತಾ ದೇವ್ ಮತ್ತು ಮೊಹಮ್ಮದ್ ನಡಿಮುಲ್ ಹಕ್ ಸೇರಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments