Select Your Language

Notifications

webdunia
webdunia
webdunia
webdunia

ಮತ ಕೇಳಲು ಜಯಲಲಿತಾ ಶವಪೆಟ್ಟಿಗೆ ತಂದರು!

ಮತ ಕೇಳಲು ಜಯಲಲಿತಾ ಶವಪೆಟ್ಟಿಗೆ ತಂದರು!
Chennai , ಶುಕ್ರವಾರ, 7 ಏಪ್ರಿಲ್ 2017 (11:18 IST)
ಚೆನ್ನೈ: ಚುನಾವಣೆ ಸಂದರ್ಭ ರಾಜಕಾರಣಿಗಳು ಮತದಾರರನ್ನು ಯಾವೆಲ್ಲಾ ಮಾರ್ಗ ಅನುಸರಿಸುತ್ತಾರೆ ನೋಡಿ. ತಮಿಳುನಾಡಿನಲ್ಲಿ ಆರ್ ಕೆ ನಗರ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಒ ಪನೀರ್ ಸೆಲ್ವಂ ಬಣ ಜಯಲಲಿತಾ ಅಣಕು ಶವಪೆಟ್ಟಿಗೆಯನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ!

 

ಜಯಲಲಿತಾರನ್ನು ಶವಪೆಟ್ಟಿಗೆಯಲ್ಲಿ ಮಲಗಿಸಿದ ಪ್ರತಿಕೃತಿಯನ್ನು ಹೊತ್ತು ಮತದಾರರ ಎದುರು ಮೆರವಣಿಗೆ ಮಾಡುತ್ತಿದೆ. ಇದಕ್ಕೆ ಚುನಾವಣಾ ಆಯೋಗ ಸೆಲ್ವಂ ಬಣಕ್ಕೆ ಛೀಮಾರಿ ಹಾಕಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ತರಾಟೆಗೆ ತೆಗೆದುಕೊಂಡಿದೆ.

 
ಜಯಲಲಿತಾರಿಂದ ತೆರವಾದ ಆರ್ ಕೆ ನಗರ ಕ್ಷೇತ್ರದ ಚುನಾವಣೆಗಾಗಿ ಪನೀರ್ ಸೆಲ್ವಂ ಮತ್ತು ಶಶಿಕಲಾ ಬಣದ ಮಧ್ಯೆ ಜಿದ್ದಾ ಜಿದ್ದಿ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ಉಬಯ ಬಣಗಲು ಸಾಧ್ಯವಾದ ಪ್ರಯತ್ನಗಳನ್ನೆಲ್ಲಾ ನಡೆಸುತ್ತಿದೆ. ಇದು ಉಭಯ ಬಣಕ್ಕೂ ಪ್ರತಿಷ್ಠೆಯ ಕಣವಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶರತ್ ಕುಮಾರ್, ಆರೋಗ್ಯ ಸಚಿವ ವಿಜಯ ಭಾಸ್ಕರ್ ನಿವಾಸದ ಮೇಲೆ ಐಟಿ ದಾಳಿ