Webdunia - Bharat's app for daily news and videos

Install App

ಇಂಡಿಯಾ ಒಕ್ಕೂಟದಲ್ಲಿನ ಪಿಎಂ ಅಭ್ಯರ್ಥಿ ಕುರ್ಚಿಗೆ ಸೂಟೇಬಲ್ ಅವರೇನಾ.?

Webdunia
ಮಂಗಳವಾರ, 12 ಡಿಸೆಂಬರ್ 2023 (20:04 IST)
ಒಂದೇ ಒಂದು ದೊಡ್ಡ ಅಘಾತ ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಬಹುದು, ಎಷ್ಟೆಲ್ಲಾ ಒಡಕುನ್ನು ಮೂಡಿಸಬಹುದು ಅನ್ನೊದಕ್ಕೆ ನಿದರ್ಶನ. ಪಂಚರಾಜ್ಯಗಳ ಅಖಾಡದಲ್ಲಿ ಕೈ ಪಾಳಯಕ್ಕೆ ಆದ ಬಹು ದೊಡ್ಡ ಸೋಲು..!
 
ಕಾಂಗ್ರೆಸ್ ಸಾರಥ್ಯದಲ್ಲಿ ಮೋದಿ ಎಂಬ ಮಹಾ ನಾಯಕನನ್ನು ಸೋಲಿಸುವ ದೊಡ್ಡ ಅಜೆಂಡಾ ಇಂಡಿಯಾ ಒಕ್ಕೂಟ ರಚನೆ ಆದಾಗಲೇ ಸಿದ್ದಗೊಂಡಿತ್ತು.. ನೋಡಿ ಬರೀ ಮೋದಿ ಎಂಬ ಪ್ರಚಂಡ ಶಕ್ತಿಯನ್ನು ಸೋಲಿಸೋದಕ್ಕೆ ಇಡೀ ಕೂಟವೇ ಒಂದಾಗಿ ಅಖಾಡಕ್ಕೆ ಇಳಿತಾವೆ ಅಂದರೆ ನಮೋ ಗತ್ತು ಏನಂತಾ ಹಿಂದೆ ಮುಂದೆ ಉರಿದುಕೊಳ್ಳುವ ಮಂದಿಗೆ ಅರ್ಥವಾಗಬೇಕಾದ ವಿಷಯ..!

ಪಂಚರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಕೊಟ್ಟ ಸೋಲಿನ ಏಟಿಗೆ, ಸುಧಾರಿಸಿಕೊಳ್ಳೊದಕ್ಕೂ ಒಂದಷ್ಟು ಟೈಂ ಖಂಡಿತಾ ಹಿಡಿಯುತ್ತೆ.. ಸದ್ಯ ಇದೀಗ ಮೋದಿಗೆ ಮೂರು ರಾಜ್ಯಗಳಲ್ಲಿ ಮತಾದಾರರು ಹಾಕಿದ ಜೈಕಾರಕ್ಕೆ ಇಂಡಿಯಾ ಕೂಟದ ಬುಡ ಅಲುಗಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ, ಈ ಕೂಟದಲ್ಲಿ ಅತಂತ್ರವಾಗುವ ಮಟ್ಟಿಗೆ.
 
ಯೆಸ್.. ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ವಿಜಯದ ಪತಾಕೆಯನ್ನು ಹಾರಿಸಿದ್ದರೆ, ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿ ಆಗದೇ, ರಾಹುಲ್‌ನಾಯಕತ್ವದಲ್ಲೇ ೨೦೨೪ರ ಸಮರವನ್ನು ಎದುರಿಸಬಹುದಿತ್ತು. ಆದರೆ ಈ ಸೋಲು ಕಾಂಗ್ರೆಸ್‌ನ್ನೆ ಇಂಡಿಯಾ ಒಕ್ಕೂಟದಲ್ಲಿ ಮೂಲೆಗುಂಪು ಮಾಡುವ ಹಂತಕ್ಕೆ ಹೋಗಿ ನಿಂತಿದೆ.. ಪ್ರಧಾನಿ ಅಭ್ಯರ್ಥಿ ಆಗಲು ಮಿತ್ರಪಕ್ಷದ ನಾಯಕರು ದ್ವಂದ್ವ ಸಿದ್ಧಾಂತಕ್ಕೆ ಕಟ್ಟು ಬಿದ್ದಿದ್ದಾರೆ..
 
ಕಾಂಗ್ರೆಸ್ ನೇತೃತ್ವದಲ್ಲೇ ಒಕ್ಕೂಟ ದಿಟ್ಟ ಹೆಜ್ಜೆಯನ್ನು ಇಟ್ಟಿದ್ರಿಂದ, ಸಹಜವಾಗಿಯೇ ಪ್ರಧಾನಿ ಅಭ್ಯರ್ಥಿಯೂ ನ್ಯಾಷಿನಲ್ ಪಾರ್ಟಿಯವರೇ ಅಂತ ಬಿಂಬಿಸಲಾಗಿತ್ತು. ಆದರೆ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಇಡೀ ಇಂಡಿಯಾ ಒಕ್ಕೂಟದ ದಿಕ್ಕನ್ನೇ ಪಕ್ಕಕ್ಕೆ ಸರಿಸಿ ಬಿಟ್ಟಿದೆ. ತಾ ಮುಂದೂ ನೀ ಮುಂದೂ ಅಂತ ಇಂಡಿಯಾ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯ ರೇಸ್‌ನಲ್ಲಿ ಹಲವು ಮಂದಿ ಟವಲ್ ಹಾಕಿ ಅಖಾಡಕ್ಕೆ ಇಳಿಯುವ ಸೂಚನೆಯನ್ನು ಕೊಟ್ಟಿದ್ದಾರೆ.. ಹಾಗೇ ನೋಡಿದರೇ, ಬಿಹಾರ ಸಿಎಂ ನಿತೀಶ್‌ಕುಮಾರ್, ಬಂಗಾಳದ ಸಿಎಂ ದೀದಿ ಕಣ್ಣು ಕೂಡ ಆ ಕಡೆ ಬಿದ್ದಿದೆ ಎನ್ನಲಾಗ್ತಿದೆ..!?? ಬಟ್ ಯಾವ ಕಣ್ಣು, ಯಾರ ಕಣ್ಣು ಅನ್ನೊದೆ ಬಿಗ್‌ಸಪ್ರೆöÊಸ್..!????

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments