Webdunia - Bharat's app for daily news and videos

Install App

ಕುಂಭ ಮೇಳ 2025: ನಾಗ ಸಾಧುಗಳು ಎಲ್ಲಿರುತ್ತಾರೆ, ಏನನ್ನು ಸೇವನೆ ಮಾಡುತ್ತಾರೆ, ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ

Krishnaveni K
ಶುಕ್ರವಾರ, 10 ಜನವರಿ 2025 (10:44 IST)
Photo Credit: X
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ಕುಂಭಮೇಳ ಆರಂಭವಾಗಲಿದ್ದು ಕುಂಭ ಮೇಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ನಾಗಾ ಸಾಧುಗಳು ಆಗಮಿಸುತ್ತಾರೆ.
 

ನಾಗಾ ಸಾಧುಗಳ ಜೀವನವೇ ಕೌತುಕದಿಂದ ಕೂಡಿದೆ. ಅವರು ನಮ್ಮ ನಿಮ್ಮಂತೆ ಮೈ ತುಂಬಾ ಬಟ್ಟೆ ಹಾಕಿಕೊಂಡು, ಸೂಟು, ಬೂಟು ಹಾಕಿಕೊಂಡು ಇರುವವರಲ್ಲ. ನಾಗಾಸಾಧುಗಳು ತಮ್ಮ ಜೀವನವಿಡೀ ಭೋಲೇನಾಥನ ಧ್ಯಾನಕ್ಕಾಗಿ ಮೀಸಲಿಡುತ್ತಾರೆ. ಇವರ ಜೀವನಶೈಲಿಯೇ ವಿಶಿಷ್ಟ ಮತ್ತು ಕುತೂಹಲಕಾರಿಯಾಗಿರುತ್ತದೆ.

ಕುಂಭಮೇಳವಿರುವಾಗ ಎಲ್ಲೋ ಇರುವ ನಾಗಾ ಸಾಧುಗಳು ಒಮ್ಮೆಲೇ ಪ್ರತ್ಯಕ್ಷರಾಗುತ್ತಾರೆ. ಪವಿತ್ರ ಸ್ನಾನ ಮಾಡಿ ದೇವರ ಧ್ಯಾನದಲ್ಲಿ ತೊಡಗಿರುತ್ತಾರೆ. ನಾಗಾಸಾಧುಗಳು ಅತ್ಯಂತ ಶಿಸ್ತಿನ ಜೀವನ ಶೈಲಿ ನಡೆಸುತ್ತಾರೆ. ಕೆಲವರು ಮಾತ್ರ ಕೆಳಗೆ ತುಂಟು ಬಟ್ಟೆ ಧರಿಸುತ್ತಾರೆ. ಇನ್ನು ಕೆಲವರು ನಗ್ನರಾಗಿಯೇ ಬರುತ್ತಾರೆ.

ನಾಗಾಸಾಧುಗಳು ಗುಹೆಗಳಲ್ಲಿ ಧ್ಯಾನ ನಿರತರಾಗಿರುತ್ತಾರೆ ಎಂದು ಹೇಳಲಾಗಿದೆ. ವರ್ಷಕ್ಕೆ ಎರಡೋ ಮೂರೋ ಬಾರಿ ಮಾತ್ರ ತಮ್ಮ ಗುಹೆಗಳನ್ನು ಬದಲಾಯಿಸುತ್ತಾರೆ. ಅವರು ನಮ್ಮಂತೆ ಅನ್ನ, ಆಹಾರ ಸೇವನೆ ಮಾಡುವುದಿಲ್ಲ. ಗಡ್ಡೆ, ಗೆಣಸು, ಹಣ್ಣುಗಳೇ ಅವರ ಆಹಾರವಾಗಿರುತ್ತದೆ. ಕಾಡು ಮೇಡುಗಳಲ್ಲಿ ಅಲೆಯುತ್ತಾ ಇರುತ್ತಾರೆ. ಕೇವಲ 6 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಅಥವಾ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳದ ಸಂದರ್ಭದಲ್ಲಿ ಮಾತ್ರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.  ಇದೀಗ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಇಂತಹ ಅನೇಕ ಸಾಧುಗಳು ಬಂದು ಸೇರುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments